Sunday, 8th September 2024

ಪರಮಾತ್ಮನ ಮೇಲಿನ ಪರಮ ವಿಶ್ವಾಸ ಧೈರ್ಯದ ಮೂಲ: ರಾಘವೇಶ್ವರ ಶ್ರೀ

ಗೋಕರ್ಣ: ಪರಮಾತ್ಮನ ಮೇಲಿನ ಪರಮ ವಿಶ್ವಾಸವೇ ಧೈರ್ಯದ ಮೂಲ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ನಮ್ಮ ಆತ್ಮವಿಶ್ವಾಸಕ್ಕೆ ಮಿತಿ ಇದೆ. ಆದರೆ ಪರಮಾತ್ಮನ ಮೇಲಿನ ವಿಶ್ವಾಸಕ್ಕೆ ಮಿತಿ ಇಲ್ಲ. ಆತನ ದಯೆಗೂ ಮಿತಿ ಇಲ್ಲ. ಆತನ ಕಾರುಣ್ಯಕ್ಕೆ ನಾವು ಪಾತ್ರರಾಗುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು. ಧೈರ್ಯವಿದ್ದಾಗ ಇಲ್ಲದ ಶಕ್ತಿಯೂ ಬರುತ್ತದೆ. […]

ಮುಂದೆ ಓದಿ

error: Content is protected !!