Thursday, 19th September 2024

ಬಿಟ್ಟಿ ದುಡಿಮೆಯ ನೆಟ್ಟಿಗರು ಮತ್ತು ಸಾಮಾಜಿಕ ಜಾಲತಾಣಗಳು!

ಅಭಿಪ್ರಾಯ

ವಿ.ಎನ್.ಲಕ್ಷ್ಮೀನಾರಾಯಣ, ಮೈಸೂರು 

ಜನಸಾಮಾನ್ಯರ ಅರಿವಿಗೆ ಸುಲಭವಾಗಿ ನಿಲುಕದ, ಸಂವಹನ ತಂತ್ರಜ್ಞಾಾನ, ಮಾಹಿತಿ ತಂತ್ರಜ್ಞಾಾನ, ಡಿಜಿಟಲ್ ತಂತ್ರಜ್ಞಾಾನ ಮತ್ತು ಚಿನ್ನೆೆಗಳನ್ನು ಬಳಸುವ ಅಲ್ಗೊೊರಿದಮ್ ಎಂಬ ತಂತ್ರ ಭಾಷೆಯ ಸಂಕೀರ್ಣ ಕೂಸಾದ ‘ಜಾಲತಾಣ’ವು ಅದರ ಹೆಸರೇ ಹೇಳುವಂತೆ ಮಾಹಿತಿ-ಸಂದೇಶ-ಚಿತ್ರ-ಸಂಗೀತ-ಆಟಗಳನ್ನು ಒದಗಿಸುವ ಪರಸ್ಪರ ಸಂಬಂಧಗಳಿಂದಾದ ‘ತಾಣಗಳ ಜಾಲ’. ಮೇಲುನೋಟಕ್ಕೆೆ ಬಯಸಿದವರೆಲ್ಲರಿಗೂ ಬಯಸಿದ್ದನ್ನು ಬಿಟ್ಟಿಿಯಾಗಿ ಕೊಡುವಂತೆ ತೋರುವ ಈ ತಾಣಗಳ ಜಾಲದಲ್ಲಿ ವಾಸ್ತವವಾಗಿ ಏನು ನಡೆಯುತ್ತಿಿದೆ ಎಂಬುದರ ಬಗ್ಗೆೆ ತಲೆಕೆಡಿಸಿಕೊಂಡವರು ಕಡಿಮೆಯೇ. ಈ ಜಾಲತಾಣಗಳು ಬಿಟ್ಟಿಿ ಎನ್ನುವುದಾದರೆ, ಬೇಕೆನ್ನುವವರಿಗೆಲ್ಲಾಾ ಬಿಟ್ಟಿಿಯಾಗಿ ಏಕೆ ಸಿಗುತ್ತಿಿವೆ? ಹೇಗೆ ಸಿಗುತ್ತಿಿವೆ? ಈ ಜಾಲಗಳನ್ನು ನಿರ್ವಹಿಸಲು ತಗಲುವ ಖರ್ಚನ್ನು ಹೇಗೆ ನಿಭಾಯಿಸುತ್ತಾಾರೆ? ಅಥವಾ ಯಾರು ಕೊಡುತ್ತಿಿದ್ದಾಾರೆ? ಇವುಗಳಲ್ಲಿ ನಡೆಯುತ್ತಿಿರುವುದು ಯಾರಿಗೆ ಯಾರ ನಿರ್ದೇಶನವೂ ಇಲ್ಲದೆ ನೆಟ್ಟಿಿಗರು ತಮಗೆ ತಾವೇ ಮಾಡಿಕೊಂಡಿರುವ ಸಾಮಾಜಿಕ ಏರ್ಪಾಟಾಗಿದೆಯೆ? ಅಥವಾ ಖಂಡಾತರದಲ್ಲೆೆಲ್ಲೋೋ ಕುಳಿತಿರುವ, ಅಗೋಚರ ಜಾಲಿಗರ ಕೈಗೆ ಸಿಕ್ಕ ನೆಟ್ಟಿಿಗರು ಅನಿವಾರ್ಯವಾಗಿ ಆಡುತ್ತಿಿರುವ ಒಂದು ಮಾಯದ ಆಟವೆ? ಅಥವಾ ಅವರಿಗೇ ಗೊತ್ತಿಿಲ್ಲದಂತೆ ತಮ್ಮ ಖರ್ಚಿನಲ್ಲೇ ಆ ಜಾಲಿಗರಿಗಾಗಿ ಮಾಡುತ್ತಿಿರುವ ಬಿಟ್ಟಿಿ ದುಡಿಮೆಯೆ? ಕೆಲವರು ಇದು ಮನೋರಂಜನೆಯ ಆಕರ ಎನ್ನುತ್ತಾಾರೆ. ಇನ್ನು ಕೆಲವರು ಖರ್ಚಿಲ್ಲದ ಮಾಹಿತಿಯ ಭಂಡಾರ ಎನ್ನುತ್ತಾಾರೆ. ಮತ್ತೆೆ ಕೆಲವರಿಗೆ ಇದು ಯಾರ ನಿಯಂತ್ರಣಕ್ಕೂ ಸಿಗದೆ ಸ್ವಚ್ಛಂದವಾಗಿರುವ ಪ್ರಜಾತಾಂತ್ರಿಿಕ ಮಾಧ್ಯಮ.

ಅಲ್ಲೊೊಬ್ಬರು, ಇಲ್ಲೊೊಬ್ಬರು ಇದು ಜನರ ಖಾಸಗಿತನಕ್ಕೆೆ ಲಗ್ಗೆೆ ಇಟ್ಟ ಆಧುನಿಕ ಗೂಢಚಾರಿಕೆಯ ತಂತ್ರಗಾರಿಕೆ ಎಂದು ಹೇಳುತ್ತಾಾರೆ. ಸಾಮಾಜಿಕ ಜಾಲತಾಣಗಳ ಒಡಲಿನಲ್ಲಿ ಇವೆಲ್ಲವೂ ಇರಬಹುದು, ಜತೆಗೆ ವರ್ಷವರ್ಷವೂ ಜಾಹಿರಾತುದಾರರರೊಂದಿಗಿನ ಮಾಹಿತಿ ರಾಶಿಯ ವ್ಯಾಾಪಾರದಲ್ಲಿ ಕೋಟ್ಯಂತರ ಡಾಲರ್ ಗಳಿಸುತ್ತಿಿರುವ ವ್ಯಾಾಪಾರಿ ಸಂಸ್ಥೆೆಗಳೂ ಹೌದು ಎನ್ನುವುದು ಆ ಸಂಸ್ಥೆೆಗಳೇ ಪ್ರಕಟಿಸುವ ಷೇರು ಬೆಲೆ ಮತ್ತು ವಾರ್ಷಿಕ ಲೆಕ್ಕಪತ್ರಗಳಿಂದ ತಿಳಿದುಬರುತ್ತದೆ. ಈ ಮಾಹಿತಿಯನ್ನು ಈ ಜಾಲತಾಣಗಳಿಗೆ ಒದಗಿಸುತ್ತಿಿರುವವರು ಯಾರು? ನೆಟ್ಟಿಿಗರು ತಮ್ಮ ಸ್ವಂತ ಹಣ, ಸಮಯ, ಉಪಕರಣಗಳನ್ನು ವ್ಯಯಮಾಡಿ ಜಾಲತಾಣಗಳನ್ನು ತಮ್ಮದೇ ಆದ ಸ್ವಂತ ಕಾರಣ-ಉದ್ದೇಶಗಳಿಗಾಗಿ ಬಳಸುತ್ತಾಾರೆ ಎಂಬುದು ಸ್ಪಷ್ಟವಾಗೇ ಇದೆ. ಹಾಗೆಯೇ ಅವರು ಹಾಗೆ ಜಾಲತಾಣಗಳನ್ನು ಬಳಸುವಾಗ ಬೇಕಾದಷ್ಟು ಸ್ವವಿರಗಳನ್ನು, ಅವರಿಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ನೇರವಾಗಿ, ಪರೋಕ್ಷವಾಗಿ ಈ ಜಾಲತಾಣಗಳಿಗೆ ಒದಗಿಸುತ್ತಾಾರೆ ಎಂಬುದೂ ನಿಜವೇ. ನೆಟ್ಟಿಿಗರು ಸಾಮಾಜಿಕ ಜಾಲತಾಣ ಸಂಸ್ಥೆೆಗಳ ಕೂಲಿಗಳಾಗಿ ಬಿಟ್ಟಿಿ ದುಡಿಮೆಯನ್ನು ಒದಗಿಸುತ್ತಿಿದ್ದಾಾರೆ ಎಂಬ ವಾದವಿದೆ. ಆದರೆ, ನೆಟ್ಟಿಿಗರೇನೂ ಕೊಟ್ಟ ಮಾಹಿತಿಗಾಗಿ ಸಾಮಾಜಿಕ ಜಾಲತಾಣ ಸಂಸ್ಥೆೆಗಳಿಂದ ಕೂಲಿ ಯನ್ನು ಪಡೆಯುವುದಿಲ್ಲ. ಅಂದಮೇಲೆ ಅವರು ಜಾಲತಾಣಗಳ ದುಡಿಮೆಗಾರರು ಹೇಗಾದಾರು? ನೆಟ್ಟಿಿಗರನ್ನು ದುಡಿಮೆಗಾರರು ಎಂದು ಪರಿಗಣಿಸಿದರೆ ತಾನೆ, ಅವರು ಬಿಟ್ಟಿಿ ದುಡಿಮೆಗಾರರಾಗುವ ಪ್ರಶ್ನೆೆ?

ಕಾರ್ಲ್‌ಮಾರ್ಕ್‌ಸ್‌ ಪ್ರಕಟಿಸಿದ ಬರಹಗಳಲ್ಲಿ ಬಹು ಮುಖ್ಯವಾದ ಎರಡು ನಿರ್ವಚನಗಳು ಇವೆ. ಅವುಗಳಲ್ಲಿ ಒಂದು ಶ್ರಮ. ಜೀವನಾಗತ್ಯ ವಸ್ತುಗಳ ಸೃಷ್ಟಿಿಗಾಗಿ ಶ್ರಮಿಕರು ಮಾಡುವ ಎಲ್ಲ ಕ್ರಿಿಯೆಗಳೂ ಶ್ರಮವೇ. ಈ ಸೃಷ್ಟಿಿಯಲ್ಲಿ ದೇಹ ಮತ್ತು ಮನಸ್ಸು (ಅಂದರೆ ಆಲೋಚನೆ, ಕಲ್ಪನೆ, ಪ್ರತಿಭೆ, ಕೌಶಲ, ತಂತ್ರ ಇತ್ಯಾಾದಿ) ಎರಡೂ ಸೇರಿರಬಹುದು. ಶ್ರಮಿಕರ ಶ್ರಮದ ಉತ್ಪನ್ನವು ದೈಹಿಕ ಶ್ರಮ ಪ್ರಧಾನವಾಗಿ ಹುಟ್ಟಿಿದ ‘ವಸ್ತು’ ಇರಬಹುದು. ಉದಾಹರಣೆಗೆ ಒಂದು ಕೋಟು ಅಥವಾ ಒಂದು ಜತೆ ಚಪ್ಪಲಿ. ಹಾಗೆಯೇ ಮಾನಸಿಕ ಶ್ರಮ ಪ್ರಧಾನವಾಗಿ ಸೃಷ್ಟಿಿಯಾದ ‘ಸೇವೆ’ ಇರಬಹುದು.
ಮಾರ್ಕ್‌ಸ್‌ ಮಾಡಿದ ಎರಡನೆಯ ಮುಖ್ಯ ನಿರ್ವಚನ, ಮೌಲ್ಯ. ಪ್ರಾಾಕೃತಿಕ ವಸ್ತುಗಳಿಗೆ ಮೌಲ್ಯವಿಲ್ಲ. ಮಾನವ ಶ್ರಮವನ್ನು ಅವಕ್ಕೆೆ ಸೇರಿಸಿದಾಗ ಮೌಲ್ಯ ಪ್ರಾಾಪ್ತಿಿಯಾಗುತ್ತದೆ. ಮೌಲ್ಯದಲ್ಲಿ ಎರಡು ವಿಧ. ಉಪಯೋಗ ಮೌಲ್ಯ ಮತ್ತು ವಿನಿಮಯ ಮೌಲ್ಯ. ಬಂಡವಳಿಗರು ಶ್ರಮಿಕರ ಶ್ರಮಶಕ್ತಿಿಯನ್ನು ಖರೀದಿಸಿ ಅವರಿಂದ ಪಡೆದ ಶ್ರಮದ ಒಂದು ಭಾಗಕ್ಕೆೆ ಮಾತ್ರ ವೇತನ ಕೊಟ್ಟು ವೇತನ ಕೊಡದ ಶ್ರಮದ ಹೆಚ್ಚುವರಿ ಫಲವನ್ನು (ಮಿಗುತಾಯ ಮೌಲ್ಯವನ್ನು) ಅವರೇ ಇಟ್ಟುಕೊಳ್ಳುತ್ತಾಾರೆ. ಅಂದರೆ ಶ್ರಮಿಕರಿಂದ ಪಡೆದ ಬಿಟ್ಟಿಿ ದುಡಿಮೆಯೇ ಮತ್ತಷ್ಟು ಬಿಟ್ಟಿಿದುಡಿಮೆಗೆ ಬಂಡವಾಳವಾಗಿ ಶ್ರಮಿಕರ ಮೇಲಿನ ಶೋಷಣೆಯು ಮುಂದುವರೆಯುತ್ತದೆ. ಈ ವಿಶ್ವದ ಸಂಪತೆಲ್ಲವೂ ಶ್ರಮಿಕರ ಪಾವತಿ ಮಾಡದ ಬಿಟ್ಟಿಿ ದುಡಿಮೆಯ ಫಲವಾದ ಮಿಗುತಾಯ ಮೌಲ್ಯದ ಸಂಚಯವೇ. ವ್ಯಾಾಪಾರದ ಲಾಭ, ಭೂಮಿಯ ಬಾಡಿಗೆ ಮತ್ತು ಹಣದ ವ್ಯಾಾಪಾರದ ಬಡ್ಡಿಿಗಳು ಈ ಮಿಗುತೆ ಮೌಲ್ಯದ ನಾನಾ ರೂಪಗಳು.

ಈ ನಿರ್ವಚನಗಳನ್ನು ಹೇಗಿವೆಯೋ ಹಾಗೆ ಇವತ್ತಿಿನ ಸನ್ನಿಿವೇಶಕ್ಕೆೆ ಅನ್ವಯಿಸಿದರೆ, ನೆಟ್ಟಿಿಗರು ಜಾಲಿಗರಿಗೆ ಯಾವ ಬಿಟ್ಟಿಿ ದುಡಿಮೆಯನ್ನೂ ಕೊಡುತ್ತಿಿಲ್ಲ ಮತ್ತು ಅವರ ಶೋಷಣೆ ನಡೆಯುತ್ತಿಿಲ್ಲ ಎಂದು ಸ್ಪಷ್ಟವಾಗುತ್ತದೆ ಎಂಬುದು ಕೆಲವು ಚಿಂತಕರ ವಾದ. ಏಕೆಂದರೆ, ಅವರ ಪ್ರಕಾರ ಬಂಡವಳಿಗರು ಶ್ರಮಿಕರನ್ನು ಕೂಲಿ/ವೇತನ ಕೊಟ್ಟು ಉತ್ಪಾಾದನೆಯಲ್ಲಿ ತೊಡಗಿಸಿ ಅವರಿಂದ ಅಗತ್ಯ ಶ್ರಮದ ಜತೆಗೆ ಹೆಚ್ಚುವರಿ ಶ್ರಮವನ್ನು ಪಡೆದುಕೊಂಡರೆ ಮಾತ್ರ ಬಿಟ್ಟಿಿ ದುಡಿಮೆ ಇದೆ ಎಂದು ಹೇಳಬಹುದು.

ಹಿಂದೆ ಒಂದು ಉತ್ಪವನ್ನದ ಮಾರಾಟಕ್ಕೆೆ ಸಂಬಂಧಿಸಿದಂತೆ ಬಳಕೆದಾರರ ಸಮೀಕ್ಷೆ ಮಾಡಬೇಕೆಂದರೆ, ಸಿಬ್ಬಂದಿಯನ್ನು ನೇಮಿಸಿಕೊಂಡು, ಮನೆ ಮನೆಗೆ ಹೋಗಿ ಸ್ಯಾಾಂಪಲ್‌ಗಳನ್ನು ಕೊಟ್ಟು, ಅವರ ಅಭಿಪ್ರಾಾಯಗಳನ್ನು ಪಡೆಯುವ ನೆಪದಲ್ಲಿ ಮನೆ ಮುಖ್ಯಸ್ಥನ ಸ್ವವಿವರ, ಮನೆ ಜನರ ವಿವರಗಳು, ಕುಟುಂಬದ ಆದಾಯ, ಶಿಕ್ಷಣ ಮಟ್ಟ, ಅಭಿರುಚಿ, ಇತ್ಯಾಾದಿ ವಿವರಗಳನ್ನು ಖುದ್ದಾಾಗಿ ಪಡೆಯಬೇಕಾಗಿತ್ತು. ಅದಕ್ಕೆೆ ತಗಲುತ್ತಿಿದ್ದ ವೆಚ್ಚ, ಸಮಯ ಮತ್ತು ಸಿಬ್ಬಂದಿಯ ತರಬೇತಿ ವೆಚ್ಚಗಳನ್ನು ಉದ್ಯಮಿಗಳೋ ಅವರ ಏಜೆಂಟರೋ ಭರಿಸಬೇಕಾಗಿತ್ತು. ಈ ಡಿಜಿಟಲ್ ಯುಗದಲ್ಲಿ ಮಾಲ್‌ಗಳಲ್ಲಿ, ಜಾತ್ರೆೆ-ಉತ್ಸವ-ಮೇಳಗಳು ನಡೆಯುವ ಸ್ಥಳಗಳಲ್ಲಿ ಕೇವಲ ಒಂದು ಪೆಟ್ಟಿಿಗೆ ಇಟ್ಟು ಬೇಕಾದ ವಿವರಗಳನ್ನು ಪೆಟ್ಟಿಿಗೆಯಲ್ಲಿ ಹಾಕಿದರೆ ಬಹುಮಾನವಿದೆ ಎಂದು ಪ್ರಕಟಿಸಿದರೆ ಸಾಕು, ಸಮೀಕ್ಷೆಯು ಬಳಕೆದಾರರ ಖರ್ಚಿನಲ್ಲೇ ನಡೆದುಬಿಡುತ್ತದೆ. ಇದೇ ವಿಧಾನವನ್ನು ಸಮೀಕ್ಷೆ ನಡೆಸಬೇಕಾದ ನಗರದ ಬೇರೆ ಬೇರೆ ಭಾಗಗಳಲ್ಲಿರಿಸಿ, ಬೆರಳೆಣಿಕೆಯ ಸಿಬ್ಬಂದಿಯೊಂದಿಗೆ ಬೇಕಾದ ಫಲಿತಾಶಗಳನ್ನು ಪಡೆದುಕೊಳ್ಳುವುದು ಈಗ ಸಾಧ್ಯವಾಗಿದೆ. ಇದನ್ನು ಮಾರ್ಕ್‌ಸ್‌ ಹೇಳುವ ಮಾಮೂಲಿ ಅರ್ಥದಲ್ಲಿ ಜನಸಾಮಾನ್ಯರ ‘ಬಿಟ್ಟಿಿ ದುಡಿಮೆ’ ಎನ್ನಬಹುದೆ? ಇಲ್ಲಿ ಬಳಕೆದಾರರ ಶೋಷಣೆ ನಡೆದಿದೆಯೆ?

ಈಗ ಸ್ಪರ್ಧೆಯ ನೆಪದಲ್ಲಿ ದೊಡ್ಡ ಬಹುಮಾನದ ಆಸೆ ತೋರಿಸಿ ಸ್ಪರ್ಧಿಗಳ ಸ್ವಂತ ಖರ್ಚಿನಲ್ಲೇ ಹಾಡು, ನೃತ್ಯ ಮುಂತಾದ ಕಾರ್ಯಕ್ರಮಗಳನ್ನು ಅಗತ್ಯ ವೆಚ್ಚಗಳೊಂದಿಗೆ ಏರ್ಪಡಿಸಿ ‘ಸ್ಪರ್ಧೆಯಲ್ಲಿ ಗೆದ್ದ’ ವ್ಯಕ್ತಿಿ-ತಂಡದ ಕಾರ್ಯಕ್ರಮವಲ್ಲದೆ, ಆಯ್ದ ಕಾರ್ಯಕ್ರಮಗಳನ್ನೂ ತಿಂಗಳಾನುಗಟ್ಟಲೆ ಪ್ರಸಾರ ಸಾಮಗ್ರಿಿಯಾಗಿ ಬಳಸಿಕೊಳ್ಳುವ ವಿಧಾನ ಟಿವಿ ಕಂಪೆನಿಗಳಲ್ಲಿ ಈ ದಿನಗಳಲ್ಲಿ ಸಾಮಾನ್ಯವಾಗಿದೆ. ವ್ಯಕ್ತಿಿ ಅಥವಾ ತಂಡಗಳಿಗೆ ಎಲ್ಲ ಸಮಾಧಾನಕರ/ಸಾಂಕೇತಿಕ ಪುರಸ್ಕಾಾರಗಳನ್ನು ಕೊಟ್ಟಮೇಲೂ ಈ ವಿಧಾನದಲ್ಲಿ ಅಡಕವಾಗಿರುವ ‘ಬಿಟ್ಟಿಿ ದುಡಿಮೆ’ಯ ಅಂಶವನ್ನು ಶೋಷಣೆ ಎನ್ನಲಾಗದೆ? ಹೆಚ್ಚು ಜನರು ವೀಕ್ಷಿಸಿದಷ್ಟೂ ಹೆಚ್ಚಿಿನ ಜಾಹಿರಾತುಗಳನ್ನು ಪಡೆಯುವ ಮೂಲಕ ಟಿವಿ ಕಂಪೆನಿಗಳು ಗಳಿಸುವ ಹಣವು ಪರೋಕ್ಷವಾಗಿ ಜನರಿಂದ ಉಪಾಯವಾಗಿ ಪಡೆಯುವ ಹೆಚ್ಚುವರಿ ಶ್ರಮದ ಮೌಲ್ಯವೇ ಅಲ್ಲವೆ?

ಬ್ಯಾಾಂಕಿನ ಸಿಬ್ಬಂದಿ ಒಂದು ಕಡೆ ಕುಳಿತು ಮಾಡುತ್ತಿಿದ್ದ ಕೆಲಸದ ಹೊರೆಯನ್ನು ವಿಕೇಂದ್ರೀಕರಿಸಿ, ಅವರಿಗೆ ಕೊಡುತ್ತಿಿದ್ದ ವೇತನ-ಭತ್ಯೆೆಗಳನ್ನು ಉಳಿಸಿ, ಡಿಜಿಟಲೀಕರಣದ ಹೆಸರಿನಲ್ಲಿ ಖಾತೆದಾರರೇ ತಮ್ಮ ಸ್ವಂತ ಖರ್ಚಿನಲ್ಲಿ ಏಟಿಎಂಗಳಿಗೆ ಹೋಗಿ ಅಥವಾ ಮನೆಯಲ್ಲೇ ಕುಳಿತು ತಮ್ಮ ಸ್ವಂತ ಖರ್ಚಿನಲ್ಲಿ ನಿರ್ವಹಿಸುವ ಕಂಪ್ಯೂೂಟರ್, ಸ್ಮಾಾರ್ಟ್‌ಫೋನ್‌ಗಳ ಮೂಲಕ ಖಾತೆದಾರರ ಕೈಯಲಿ ಮಾಡಿಸುವ ‘ಸೇವೆ’ ಯಾರ ಸೇವೆ? ಮೇಲುನೋಟಕ್ಕೆೆ ಖಾತೆದಾರರಿಗೆ ಒದಗಿಸಿದ ವಿಶೇಷ ಸೌಲಭ್ಯದಂತೆ ಕಾಣುವ ಈ ‘ಸೇವೆ’ಯಲ್ಲಿ ಅಡಕವಾಗಿರುವುದು ಬ್ಯಾಾಂಕಿನ ಉದ್ಯೋೋಗಿಗಳಾಗಿ ಸಂಬಳ ಪಡೆಯದ ಜನರ ಬಿಟ್ಟಿಿ ದುಡಿಮೆಯೇ ಅಲ್ಲವೆ? ಈ ಬಿಟ್ಟಿಿ ದುಡಿಮೆಯಿಂದ ಬ್ಯಾಾಂಕುಗಳಿಗೆ ಉಳಿತಾಯವಾಗುವ ಹಣವು ಮಾರ್ಕ್‌ಸ್‌ ಹೇಳುವ ಮಿಗುತಾಯ ಮೌಲ್ಯದ ಮತ್ತೊೊಂದು ರೂಪವಲ್ಲವೆ? ಹಾಗೆ ಉಳಿದ ಹಣ ಉನ್ನತ ಅಧಿಕಾರಿಗಳ ಹೆಚ್ಚಿಿನ ಸಂಬಳಕ್ಕೆೆ, ಬ್ಯಾಾಂಕಿನ ‘ಆಧುನೀಕರಣಕ್ಕೆೆ’ ಅಂದರೆ ಇತರ ವ್ಯಾಾಪಾರಿಗಳಿಗೆ, ಹೆಚ್ಚುವರಿ ಯಂತ್ರೋೋಪಕರಣಗಳಿಗಾಗಿ ಖರ್ಚು ಮಾಡಬಹುದೇ ಹೊರತು ಖಾತೆದಾರರ ಠೇವಣಿಗಳಿಗೆ ಹೆಚ್ಚಿಿನ ಬಡ್ಡಿಿಯನ್ನು ಕೊಡುವುದಕ್ಕೆೆ ಬಳಕೆಯಾಗುವುದಿಲ್ಲ.

ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸಲು ತರಬೇತಿ ಪಡೆದ ನುರಿತ ಸಿಬ್ಬಂದಿ ಸಂಸ್ಥೆೆಗಳಿಂದ ಸಂಬಳ ಪಡೆಯುತ್ತಾಾರೆ. ನೆಟ್ಟಿಿಗರ ಸಂಖ್ಯೆೆಗೆ ಹೋಲಿಸಿದರೆ ಇವರ ಸಂಖ್ಯೆೆ ಬೆರಳೆಣಿಕೆಯಷ್ಟು ಮಾತ್ರ. ನೆಟ್ಟಿಿಗರಿಂದ ಪಡೆಯುವ ಮಾಹಿತಿಗಳನ್ನು ಸಂಸ್ಕರಿಸಿ ವ್ಯಾಾಪಾರಿಗಳಿಗೆ ತಲುಪಿಸುವುದು, ಜಾಹಿರಾತುದಾರರನ್ನು ಜಾಲತಾಣದಲ್ಲಿ ಜಾಹಿರಾತು ಹೂಡುವಂತೆ ಆಕರ್ಷಿಸುವುದು ಇವರ ಕೆಲಸ. ಈ ಕೆಲಸಗಳಿಂದಾಗಿ ಅವರಿಗೆ ಸಿಗುವ ಸಂಬಳ ಅಲ್ಪವೇನಲ್ಲ, ನಿಜ. ಆದರೂ ಅವರ ದುಡಿಮೆಯಿಂದಾಗಿ ಜಾಲತಾಣ ಕಂಪೆನಿಗಳ ಆದಾಯವೇನೂ ಕೋಟಿಗಟ್ಟಲೆ ಹೆಚ್ಚುವುದಿಲ್ಲ. ಹಾಗಿದ್ದರೆ ನೆಟ್ಟಿಿಗರು ಜಾಲತಾಣಗಳ ಆದಾಯವನ್ನು ಈಗ ಇರುವಷ್ಟು ಅಗಾಧ ಪ್ರಮಾಣದಲ್ಲಿ ಹೇಗೆ ಹೆಚ್ಚಿಿಸುತ್ತಿಿರಬಹುದು?

ನೆಟ್ಟಿಿಗರು ಒಂದೇ ಸಮಯದಲ್ಲಿ ಮೂರು ಬಗೆಯ ಬಿಟ್ಟಿಿ ದುಡಿಮೆ ಮಾಡುತ್ತಾಾರೆ. ಒಂದು, ಜಾಲತಾಣವನ್ನು ತೆರೆದ ಕ್ಷಣವೇ ಜಾಲತಾಣಕ್ಕೆೆ ಜಾಹಿರಾತುದಾರರಿಂದ ಹಣ ಸಂದಾಯವಾಗುವ ಸಮಯದ ಗಣನೆ ಪ್ರಾಾರಂಭವಾಗುತ್ತದೆ. ಅಂದರೆ ನೆಟ್ಟಿಿಗರು ಜಾಲತಾಣವನ್ನು ವೀಕ್ಷಿಸಲು ತೆರೆಯುವುದೇ ಜಾಲತಾಣ ಕಂಪೆನಿಗೆ ಕೊಡುವ ಬಿಟ್ಟಿಿ ‘ದುಡಿಮೆ’ಯಾಗುತ್ತದೆ. ಎರಡು, ನೆಟ್ಟಿಿಗರು ಜಾಲತಾಣದಲ್ಲಿ ವಿಹರಿಸುತ್ತಿಿದ್ದಂತೆ, ಅವರಿಂದ ಪಡೆದ ಸಂಸ್ಕರಿಸಿದ ಮಾಹಿತಿಯನ್ನು ಆಧರಿಸಿ ಆ ನೆಟ್ಟಿಿಗರ ಇಷ್ಟ, ಆಯ್ಕೆೆ, ಮನೋಧರ್ಮಗಳನ್ನು ಆಧರಿಸಿ ಲಗತ್ತಿಿಸಿದ ಜಾಹಿರಾತು ಕಾಣಿಸಿಕೊಳ್ಳುತ್ತದೆ. ನೆಟ್ಟಿಿಗರು ಅದನ್ನು ತೆರೆದರೆ ಸಾಕು, ಸರಕನ್ನು ಕೊಂಡುಕೊಳ್ಳಬೇಕೆಂದಿಲ್ಲ, ಜಾಹಿರಾತುದಾರರಿಂದ ಜಾಲತಾಣಕ್ಕೆೆ ಹಣ ರವಾನೆಯಾಗುತ್ತದೆ. ಮೂರು, ನೆಟ್ಟಿಿಗರು ಆ ಜಾಹಿರಾತಿನಲ್ಲಿ ನೋಡಿದ ಸರಕನ್ನು ಖರೀದಿಸಿದರೆ, ಆಗಲೂ ಜಾಲಿಗ ಕಂಪನಿಗೆ ಜಾಹಿರಾತುದಾರರಿಂದ ಹಣ ಸಂದಾಯವಾಗುತ್ತದೆ.

ಇದಲ್ಲದೆ ಪ್ರತಿಯೊಬ್ಬ ನೆಟ್ಟಿಿಗನೂ ಬಳಕೆದಾರನಾಗಿ ಜಾಲತಾಣವನ್ನು ತೆರೆಯುತ್ತಲೇ ಎರಡು ಬಗೆಯ ಬಿಟ್ಟಿಿ ದುಡಿಮೆಯಲ್ಲಿ ತೊಡಗುತ್ತಾಾನೆ. ಒಂದು, ತನ್ನ ಸ್ವವಿವರಗಳನ್ನು ಜಾಲತಾಣದಲ್ಲಿ ಬಿಡುತ್ತಾಾನೆ. ಒಂದು ಎಲೆಯನ್ನು ಮುಟ್ಟಿಿದರೆ ಇಡೀ ಮರವೇ ಸ್ಪಂದಿಸುವಂಥ ಸಂಪರ್ಕಜಾಲವುಳ್ಳ ಜಾಲತಾಣಗಳಲ್ಲಿ ತನ್ನ ಸ್ವವಿವರಗಳನ್ನು ಕೊಡುವುದರೊಂದಿಗೆ ತನ್ನೊೊಂದಿಗೆ ನಾನಾ ರೀತಿಯಲ್ಲಿ ಸಂಪರ್ಕವಿರುವ ಎಲ್ಲರ ವಿವರಗಳನ್ನೂ ಜಾಲತಾಣಕ್ಕೆೆ ತಲುಪಿಸುವ ಕೊಂಡಿಯಾಗುತ್ತಾಾನೆ. ಈ ಜಾಲತಾಣಗಳನ್ನು ತೆರೆಯುವ ನೆಟ್ಟಿಿಗರ ಆಸೆ, ಆಯ್ಕೆೆ, ಅನಿಷ್ಟ, ರಾಜಕೀಯ ಒಲವು, ಕುಟುಂಬದ ಸದಸ್ಯರ ವಿವರಗಳು ಇನ್ನೂ ಅದೆಷ್ಟೋೋ ಮಾಹಿತಿಗಳನ್ನು ತಾಣದ ಮಾಹಿತಿ ಭಂಡಾರದೊಳಕ್ಕೆೆ ಬಸಿದುಕೊಳ್ಳುವಂತೆ ಸಾಮಾಜಿಕ ಜಾಲತಾಣಗಳು ರಚನೆಯಾಗಿವೆ. ಒಬ್ಬ ಶ್ರಮಿಕನನ್ನು ನೇಮಿಸಿಕೊಂಡು ಅವನಿಂದ ಶ್ರಮವನ್ನು ಬಸಿದುಕೊಂಡು ‘ಬಿಟ್ಟಿಿ ದುಡಿಮೆಯ’ ಲಾಭವನ್ನು ಪಡೆಯುವ ಬಂಡವಾಳಶಾಹಿ ಉತ್ಪಾಾದನಾ ವಿಧಾನವೇ ಇಲ್ಲೂ ಬಳಕೆಯಾಗುತ್ತದೆ.

ಇರುವ ಟಿವಿ ವಾಹಿನಿಗಳು ವೀಕ್ಷಿಸುವವರನ್ನೇ ಹೊಸಬಗೆಯ ಕಾರ್ಮಿಕರನ್ನಾಾಗಿ ಮಾಡುತ್ತಿಿವೆ. ಅವರು ಟಿವಿ ಕಾರ್ಯಕ್ರಮಗಳನ್ನು ನೋಡುವುದೇ ಒಂದು ಕಾಯಕವಾಗುತ್ತದೆ. ಹೆಚ್ಚು ಜನರು ನೋಡಿದಷ್ಟೂ ಆ ವಾಹಿನಿಯ ಟಿಆರ್‌ಪಿ ಹೆಚ್ಚುತ್ತದೆ. ಟಿಆರ್‌ಪಿ ಹೆಚ್ಚಿಿದಷ್ಟೂ ಜಾಹಿರಾತುಗಳ ಸಂಖ್ಯೆೆ ಹೆಚ್ಚುತ್ತದೆ. ಅದರಿಂದ ವಾಹಿನಿಯ ಗಳಿಕೆ ಹೆಚ್ಚುತ್ತದೆ. ಇದು ಒಮ್ಮುಖದ ಕಾರ್ಮಿಕತೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಿಗರ ವೀಕ್ಷಣೆಯು ಕಾಯಕವೂ ಹೌದು, ಮಿಗುತಾಯ ಮೌಲ್ಯವನ್ನು ಸೃಷ್ಟಿಿಸುವ ದುಡಿಮೆಯೂ ಹೌದು.

ಜನರು, ಶೋಷಣೆಯ ಬಗ್ಗೆೆ ಹೆಚ್ಚು ಹೆಚ್ಚು ಅರಿವು, ತಿಳುವಳಿಕೆಗಳನ್ನು ಪಡೆದು ಬಂಡವಾಳವಾದವನ್ನು ತಿರಸ್ಕರಿಸಿ ಸಮ ಸಮಾಜವನ್ನು ಕಟ್ಟುವವರೆಗೂ ಬಂಡವಳಿಗರು ಮೇಲುಗೈ ಪಡೆದು ಜನಸಮುದಾಯವನ್ನು ವಂಚಿಸುತ್ತಲೇ ಇರುತ್ತಾಾರೆ. ಇದಕ್ಕಾಾಗಿ ಬೇಕಾದ ಸಮಗ್ರ ರಾಜಕೀಯ ದೃಷ್ಟಿಿ ಮಾರ್ಕ್‌ಸ್‌‌ವಾದದಿಂದ ಮಾತ್ರ ದೊರೆಯುವಂಥದು. ಈ ಮಾಹಿತಿ ಪ್ರಧಾನ ಡಿಜಿಟಲ್ ಯುಗದ ಬಂಡವಾಳದಲ್ಲಿ ಸಾಮಾಜಿಕ ಜಾಲತಾಣಗಳ ಹಿಂದಿರುವ ರಾಜಕೀಯವನ್ನು ಅವುಗಳು ಮುಂದೆ ಮಾಡುವ ತಾತ್ಕಾಾಲಿಕ ಸಂತೋಷವು ಮರೆಸದಂತೆ ನೋಡಿಕೊಳ್ಳುವ ಎಚ್ಚರ ಅತ್ಯಂತ ಮುಖ್ಯವಾದದ್ದು. ಜಾಗ್ರತನಾಗು ಬಳಕೆದಾರ ಜಾಗ್ರತನಾಗು ಎನ್ನುವ ಸಂದೇಶ ಬಳಕೆದಾರರಾದ ನೆಟ್ಟಿಿಗರಿಗೆ ತೀರಾ ಅವಶ್ಯಕ.

Leave a Reply

Your email address will not be published. Required fields are marked *