ಯಾದಗಿರಿ: ತಹಸೀಲ್ದಾರ್ ನಕಲಿ ಸಹಿ ಮಾಡಿ ಲಕ್ಷಾಂತರ ರೂಪಾಯಿ ಲೂಟಿ ಮಾಡಿ ವಂಚಿಸಿದ ಘಟನೆ ಸುರಪುರ ಪಟ್ಟಣದಲ್ಲಿ ನಡೆದಿದೆ.
ಮಹಾಲಕ್ಷ್ಮೀ ಎಂಟರ್ ಪ್ರೈಸಸ್ ಹೆಸರಲ್ಲಿ 75 ಲಕ್ಷ ರೂಪಾಯಿ ಹಣವನ್ನು ಹಣ ವರ್ಗಾವಣೆ ಮಾಡಿಕೊಂಡು ಮಾಲೀಕ ಲಕ್ಷ್ಮೀ ಕಟ್ಟಿಮನಿ ವಂಚಿಸಿದ್ದಾರೆ. ಸುರಪುರ ತಹಸೀಲ್ದಾರ್ ನಿಂಗಪ್ಪ ಬಿರಾದಾರ್ ಹೆಸರಲ್ಲಿ ವಂಚನೆ ಮಾಡಿದ್ದಾರೆ. ಮಾಲೀಕ ಲಕ್ಷ್ಮೀ ಕಟ್ಟಿಮನಿ ವಿರುದ್ದ ವಂಚನೆ ದೂರು ನೀಡಲಾಗಿದೆ.