ಶಿರಸಿ: ಶಿರಸಿ ತಾಲೂಕಿನ ಕಲಕೊಪ್ಪದಲ್ಲಿ ಅಕ್ರಮವಾಗಿ ಜಿಂಕೆ ಹಿಡಿದಿಟ್ಟುಕೊಂಡಿದ್ದ ವ್ಯಕ್ತಿಯ ಮನೆಗೆ ದಾಂಡೇಲಿ ಸಿಐಡಿ ಅರಣ್ಯ ಘಟಕ ದಳದಿಂದ ದಾಳಿ ನಡೆದಿದೆ. ಜಿಂಕೆ ದಿಗ್ಬಂಧನಗೊಳಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಹಬೀಬ ರೆಹಮಾನ ಮಹ್ಮದ್ ಸಾಬ್(46) ಬಂಧಿತ ಆರೋಪಿ. ಆರೋಪಿಗೆ ೧೫ ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಿಂಕೆ ವಶಪಡಿಸಿಕೊಂಡು ಶಿರಸಿ ಅರಣ್ಯ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಪಿ.ಎಸ್.ಐ. ಮಂಜುನಾಥ ಬೋರಕರ ಹಾಗು ಸಿಬ್ಬಂದಿಯಿಂದ ದಾಳಿ ನಡೆಸಿದರು.
ಆರೋಪಿ ಆರು ತಿಂಗಳುಗಳಿಂದ ಅಕ್ರಮ ಬಂಧನದಲ್ಲಿ ಕಾಡು ಪ್ರಾಣಿ ಜಿಂಕೆಯನ್ನು ಇಟ್ಟಿದ್ದ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದಾರೆ.
ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.