ಬೆಂಗಳೂರು: ರಾಜ್ಯದಲ್ಲಿ ಬರೋಬ್ಬರಿ 9 ತಿಂಗಳ ಬಳಿಕ, ಇಂದಿನಿಂದ ಶಾಲಾ-ಕಾಲೇಜು ಪುನರಾರಂಭಗೊಂಡಿದೆ.
ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಬರುತ್ತಿರುವುದರಿಂದ ಹಾಗೂ ಹೊಸ ವರ್ಷದ ದಿನ ಇಂದು ಶಾಲಾ-ಕಾಲೇಜುಗಳನ್ನು ಅನೇಕ ಕಡೆಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಳಿಸಲಾಗಿದೆ. ವಿದ್ಯಾರ್ಥಿಗಳು ಕೂಡ ಶಾಲಾ-ಕಾಲೇಜುಗಳತ್ತ ಸಂತಸದಿಂದ ಕೊರೋನಾ ಭೀತಿಯ ನಡುವೆಯೂ ಹೆಜ್ಜೆ ಹಾಕಿದ್ದಾರೆ.
9 ತಿಂಗಳ ಬಳಿಕ ರಾಜ್ಯಾದ್ಯಂತ ಶಾಲಾ ಕಾಲೇಜು ಪುನರಾರಂಭ. SSLC, PUC ವಿದ್ಯಾರ್ಥಿಗಳಿಗೆ ತರಗತಿ ಶುರುವಾಗಿದೆ. ಪೋಷಕರ ಅನುಮತಿಯೊಂದಿಗೆ ಮಕ್ಕಳು ಹಾಜರಾಗುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ತರಗತಿ ಆರಂಭಿಸುತ್ತಿದ್ದೇವೆ ಎಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.