ತುಮಕೂರು: ಮಾಜಿ ಸಿಎಂ ಕುಮಾರಸ್ವಾಮಿ ಇಲ್ಲಸಲ್ಲದ ಹೇಳಿಕೆ ನೀಡಬಾರದು, ಜವಾಬ್ದಾರಿ ಅರಿತು ಮಾತನಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿರಾದಲ್ಲಿ ರಾಜೇಶ್ಗೌಡ ಬಿಜೆಪಿಗೆ ಸೇರಲು ಪರೋಕ್ಷವಾಗಿ ಕುಮಾರಸ್ವಾಮಿಯವರ ಪಾತ್ರವಿದೆ. ಮಾಜಿ ಶಾಸಕ ಮೂಡಲಗಿರಿಯಪ್ಪ ಜೆಡಿಎಸ್ನಲ್ಲಿ ಇದ್ದವರು, ಅವರ ಮಗ ಈಗ ರಾಜೇಶ್ಗೌಡ ಬಿಜೆಪಿಗೆ ಸೇರಲು ಕಾಂಗ್ರೆಸ್ ಪಾತ್ರವಿಲ್ಲ ಎಂದರು.
ಶಿರಾ ಮತ್ತು ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತವಿಲ್ಲ. ಎಲ್ಲಾ ನಾಯಕರು ಒಗ್ಗೂಡಿ ಕಾಂಗ್ರೆಸ್ ಗೆಲುವಿಗೆ ಕೆಲಸ ಮಾಡಲಿದ್ದಾರೆ. ಶಿರಾದಲ್ಲಿ ಪ್ರಚಾರಕ್ಕೆ ಖುದ್ದು ಬರುತ್ತೇನೆ ಎಂದರು.
ಸರಕಾರ ಆರ್ಥಿಕ-ಜಾತಿ ಸಮೀಕ್ಷೆಯನ್ನು ಬಹಿರಂಗಗೊಳಿಸಬೇಕು. ಇದರಿಂದ ಸಮುದಾಯ ಗಳಿಗೆ ಸವಲತ್ತು ನೀಡಲು ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಪರಮೇಶ್ವರ್, ಸಂಸದ ಚಂದ್ರಪ್ಪ, ಮಾಜಿ ಸಂಸದ ಮುದ್ದ ಹನುಮೇಗೌಡ, ಶಿರಾ ಅಭ್ಯರ್ಥಿ ಜಯಚಂದ್ರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಮಾಜಿ ಶಾಸಕ ಷಫಿ ಅಹಮದ್ ಇದ್ದರು.