Friday, 19th April 2024

‘ಕೈ’ ಹಿಡಿದ ಕಲ್ಕೆರೆ

ತುಮಕೂರು: ದಳ ಪಾಳಯದಲ್ಲಿ ಗುರುತಿಸಿಕೊಂಡಿದ್ದ ಶಿರಾ ಭಾಗದ ಮುಖಂಡ ಕಲ್ಕೆರೆ ರವಿಕುಮಾರ್ ದಳ ಸರಿಸಿ ಕೈ ಹಿಡಿದಿ ದ್ದಾರೆ.

ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕುಮಾರ್ ಅವರಿಗೆ ದಳಪತಿಗಳು ಅಸ್ತು ಎನ್ನುವ ಮುನ್ಸೂಚನೆ ಕಾಣದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇರ್ಪಡೆ ಗೊಂಡಿದ್ದಾರೆ. ರವಿಕುಮಾರ್ ಪತ್ನಿ ಲತಾ ಅವರನ್ನು ಕೆಳಗಿಳಿಸಿ ಜಿಪಂ ಅಧ್ಯಕ್ಷ ಸ್ಥಾನವನ್ನು ಗೊಲ್ಲ ಸಮುದಾಯಕ್ಕೆ ಬಿಟ್ಟುಕೊಡುವ ಬಗ್ಗೆ ವ್ಯಾಪಕ ರಣತಂತ್ರ ನಡೆಯುತ್ತಿದೆ. ಈ ಬಗ್ಗೆ ಜೆಡಿಎಸ್ ಮುಖಂಡರು ಮೌನವಾಗಿರುವ ಹಿನ್ನೆಲೆಯಲ್ಲಿ ರವಿಕುಮಾರ್ ದಳ ತೊರೆದಿ ದ್ದಾರೆ.

ಇದೇ ವೇಳೆ ಸುಮಾರು 30ಕ್ಕೂ ಅಧಿಕ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಕಲ್ಕೆರೆ ರವಿಕುಮಾರ್ ವಿರುದ್ದ ಶಿರಾ ಭಾಗದ ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಕ್ಕಾಗಿ ಅನ್ನ ಕೊಟ್ಟ ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Leave a Reply

Your email address will not be published. Required fields are marked *

error: Content is protected !!