Sunday, 8th September 2024

ಚಳಿಗಾಲದ ಅತಿಥಿ ಹೃದಯಾಘಾತ

ಡಾ.ಕರವೀರಪ್ರಭು ಕ್ಯಾಲಕೊಂಡ

ಹೃದಯಾಘಾತವೆಂದರೆ ದೈವಕೃತ ಪಂಪಿನಿಂದ ರಕ್ತ ಸಂಚಾರ ಏಕಾಏಕಿ ನಿಂತು ಬಿಡುವುದು. ಲಘು ಸ್ವರೂಪದ್ದಾದರೆ ರೋಗಿ ಚೇತರಿಕೆ ಸಾಧ್ಯ. ಬಲವಾದ ದ್ದಾದರೆ ಸಾವು ಖಚಿತ. ಹೃದಯವೆಂಬ ಯಂತ್ರವೂ ಒಂದು ಸಜೀವ ಅವಯವ, ಅದರ ಹೊರೆಮೈಯ ರಕ್ತನಾಳಗಳಲ್ಲಿ ಅಡ್ಡಿ ಆತಂಕ ಒದಗುವುದರಿಂದ ಒಂದು ಭಾಗದ ಕಾರ್ಯಕ್ಷಮತೆ ಕುಸಿದು ಇಡೀ ಯಂತ್ರವೇ ದುಸ್ಥಿಗೆ ತಲುಪುತ್ತದೆ.

ಚೇತರಿಕೆ ಸಾಧ್ಯವಾಗದಿದ್ದರೆ ಸಾವು ಸನ್ನಿಹಿತ. ಹೆಚ್ಚಿನ ಹೃದಯಾಘಾತಗಳು ಚಳಿಗಾಲದಲ್ಲಿ ಅದೂ ನಸುಕಿನಲ್ಲಿ ಆಗುವುದು ಚಳಿಗಾಲದ ದೊಡ್ಡ ದುರಂತ ಚಳಿಗಾಲದ ರಾತ್ರಿಗಳಲ್ಲಿ ತಾಪಮಾನ ತುಂಬಾ ಕಡಿಮೆ ಯಾಗುವುದರಿಂದ ಅಪಧಮನಿಗಳು ಪೆಡುಸಾಗುತ್ತದೆ ರಕ್ತದೊತ್ತಡ ಹಾಗೂ ಪ್ರೋಟಿನಗಳ ಪ್ರಮಾಣ ಏರುತ್ತದೆ. ಇವೆಲ್ಲವುಗಳ ಕ್ರೋಢೀಕೃತ ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ ಹಾಗೆಯೇ ಈ ಅವಧಿಯಲ್ಲಿ ವೈರಲ್ ಸೋಂಕುಗಳೂ ಹೆಚ್ಚಿನ ಪ್ರಮಾಣದಲ್ಲಿ ಹರಡುವುದರಿಂದಾಗಿ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆಗಳುಂಟಾಗಿ ಹೃದಯದ ಸಮಸೆಗಳು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಇದೆಲ್ಲವುಗಳಿಂದಾಗಿ ರಕ್ತ ಸಂಚಾರಕ್ಕೆ ಅಡ್ಡಿ ಆತಂಕಗಳು ಉಂಟಾಗಿ ಹೃದಂiiಕ್ಕೆ ಸಾಕಷ್ಟು ಆಮ್ಲಜನಕ ದೊರೆಯದೇ ಹೃದಯಾಘಾತ ವಾಗುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದ ಸಿಂಥೇಜಿಕ್ ಡಿಸ್ಟಾಜ್ ಅಂದರೆ ಅಡ್ರಿನಾಲಿನ್ ಪಂಪಿಂಗ್ ಹೆಚ್ಚಾಗಿರುತ್ತದೆ. ಇದರಿಂದಾಗಿ ಹೃದಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಅದು ಹೆಚ್ಚು ಕಠಿಣವಾಗಿ ಕೆಲಸದಲ್ಲಿ ತೊಡಗುವಂತಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧೈತೆಯುಳ್ಳ ಅಥವಾ ಈಗಾಗಲೇ ಹೃದಯ ಸಂಬಂಧಿ ತೊಂದರೆಗಳಿಂದ ಬಳಲುತ್ತಿರುವವರಲ್ಲಿ ಹೃದಯಾಘಾತದ ಪ್ರಮಾಣ ಇನ್ನೂ ಹೆಚ್ಚು ಜತೆಗೆ ಚಳಿಗಾಲದಲ್ಲಿ ಸಂಭವಿಸುವ ಹೃದಯಾಘಾತ ಹೆಚ್ಚು ಗಂಭೀರ ಸ್ವರೂಪದ್ದಾಗಿರುತ್ತದೆ.

ಚಳಿಗಾಲದ ದಿನಗಳಲ್ಲಿ ಕೊಬ್ಬರಿ ಎಣ್ಣೆ ಗಟ್ಟಿಯಾಗುವ ಸಂದರ್ಭ ಗಮನಿಸಿದ್ದೀರಿ. ರಕ್ತದ ತರಲತೆ ಕಡಿಮೆಯಾಗಿ ಕೊಬ್ಬು ಅಧಿಕವಿದ್ದರೆ ಇಂಥ ಅಪಾಯ ದೇಹ ದೊಳಗೂ ಸಂಭವಿ ಸೀತು. ಬೇಸಿಗೆಗೂ ಚಳಿಗಾಲಕ್ಕೂ ಈ ವ್ಯತ್ಯಾಸ ಗಮನಾರ್ಹ. ಹೃದಯದ ಹೊರಗೆ ಗೋಡೆಗಳಲ್ಲಿ ಸೂಕ್ಷ್ಮ ಕಿರುನಾಳಗಳಲ್ಲಿ ರಕ್ತ ಪ್ರವಾಹ ನಿರಂತರ. ಹೃದಯ ಆರೋಗ್ಯಕ್ಕೆ ಪೂರಕ. ಚಳಿ ದಿನಗಳಲ್ಲಿ ಇಂಥಹ ಹರಿಯುವಿಕೆಗೆ ಕಡಿವಾಣವಿರುವುದೆಂದು ಹಾರ್ವಡ್ ವೈದ್ಯಕೀಯ ಮಹಾವಿದ್ಯಾಲಯದ ತಜ್ಞ ಥಾಮಸ್ ಲೇಲೆ ಅಭಿಪ್ರಾಯ.

ಕಿರುನಾಳಗಳ ಒಳಪದರ ಕಿರಿದಾಗಿದ್ದರೆ, ಕೊಬ್ಬಿನ ಕರಣೆ ಕಟ್ಟಿದರಂತೂ ಸಂಚಾರ ಕಠಿಣ. ಆಗಲೂ ಹೃದಯಾಘಾತ ಕಟ್ಟಿಟ್ಟ ಬುತ್ತಿ ೩೦,೨೦,೪೦ ಶೇಕಡಾಂಶ ಮುಚ್ಚಿದ ಹಾದಿ ಎಂದೆಲ್ಲಾ ವೈದ್ಯರ ಪರಿಭಾಷೆ ಬಗ್ಗೆ ಕೇಳಿರಬಹುದು. ಒಬ್ಬ ರೋಗಿಗೆ ಶೇಕಡಾ ೩೦ ಅಂಶ ಮಾರ್ಗ ಕಿರಿದಾಗಿದೆ ಎಂದರೆ, ಉಳಿದ ದಿನಗಳಂತಲ್ಲ. ಚಳಿಯಲ್ಲಿ ಅದು ಶೇಕಡಾ ೭೦ಕ್ಕೆ ಸಮ ಎಂದರೆ ಸಮಸ್ಯೆ ಎಷ್ಟು ವಿಕೋಪಕ್ಕೆ ತಲುಪಿರುತ್ತದೆ! ರಕ್ತನಾಳಗಳ ಒಳಪರೆ ಹೊರಸೂಸುವ ನೈಟ್ರಿಕ್ ಆಕ್ಸೈಡ್‌ನಿಂದ ಮಾರ್ಗ ಸಲೀಸಾಗು ತ್ತದೆ.

ರಕ್ತಸಂಚಾರ ಸುಗಮವಾದರೆ ಪೆಡಸಾದ,ಕೊಬ್ಬಿನ ಕರಣೆ ತುಂಬಿದ ರಕ್ತನಾಳಗಳಲ್ಲಿ ಇಂಥ ಪ್ರಕ್ರಿಯೆ ಜರಗುವುದಿಲ್ಲ. ಬೆಚ್ಚಿ ಬೀಳಿಸುವ ಅಚ್ಚರಿಯ ವಿಷಯವನ್ನು ಇತ್ತಿಚೆಗೆ ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ ಅದೆಂದರೆ ಡಿ ಜೀವಸತ್ವದ ಕೊರೆತೆಯೂ ಹೃದಯಾಘಾತವನ್ನುಂಟು ಮಾಡಬಲ್ಲದಂತೆ ನಮಗೆಲ್ಲ ಗೊತ್ತಿರು
ವಂತೆ ಸೂರ್ಯಕಿರಣ ಡಿ ಜೀವಸತ್ವದ ಬಂಢಾರ ಚಳಿಗಾಲದಲ್ಲಿ ಮನೆಯೊಳಗೆ ಇರಲಿಷ್ಟಪಡುವುದರಿಂದ, ಸೂರ್ಯಕಿರಣಕ್ಕೆ ಮೈಯೊಡ್ಡುವ ಪ್ರಮಾಣ ಕುಗ್ಗಿ ಡಿ ಜೀವಸತ್ವದ ಉತ್ಪಾದನೆಯು ಕಡಿಮೆಯಾಗುತ್ತದೆ. ವಿಜ್ಞಾನಿಗಳು ಹೊರಗೆಡವಿದ ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಎತ್ತರ ಪ್ರದೇಶಗಳಲ್ಲಿ
ವಾಸಿಸುವವರಿಗೆ ಹೃದಯಾಘಾತದ ರಿಸ್ಕ್ ಕಡಿಮೆ ಯಾಕೆಂದರೆ ಎತ್ತರಕ್ಕೆ ಹೋದಂತೆ ಸೂರ್ಯಕಿರಣಗಳಲ್ಲಿ ಅಲ್ಟ್ರಾವಲೆಯಟ್ ಪ್ರಮಾಣ ಹೆಚ್ಚಿ ಡಿ ಜೀವಸತ್ವದ ಉತ್ಪಾದನಾ ಪ್ರಮಾಣವೂ ಹೆಚ್ಚಿರುತ್ತದೆ. ಆದ್ದರಿಂದಲೇ ಏನೋ ರಕ್ತದೊತ್ತಡ ಇಲ್ಲದವರಿಗೂ ಕೊಲೇಸ್ಟ್ರಾಲ ಕಡಿಮೆ ಇರುವ ಕೆಳ ಪ್ರದೇಶದ ಅನೇಕ ಜನರಲ್ಲಿ
ಹೃದಯಾಘಾತದ ಪ್ರಮಾಣ ಹೆಚ್ಚಂತೆ!

ಚಳಿಗಾಲವು ಆಲಸ್ಯರ ಸ್ವರ್ಗವೇ ಸರಿ! ಮಧುಮೇಹ ರೋಗವು ಈ ಕಾಲದಲ್ಲಿ ಉಲ್ಬಣಿಸುತ್ತದೆ ಸ್ಥೂಲ ಕಾಯಗಳನ್ನು ಕಂಡರೆ ಹೃದಯಾಘಾತಕ್ಕೆ ಎಲ್ಲಿಲ್ಲದ ಪ್ರೀತಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಹಸಿವು ಹೆಚ್ಚಾಗುತ್ತದೆ. ವೈರಸ್‌ಗಳೂ ಈ ಕಾಲದಲ್ಲಿಯೇ ಹೆಚ್ಚು ಕ್ರಿಯಾಶೀಲವಾಗುತ್ತದೆ. ಜನ ಮನೆಯೊಳಗೆ ಇರಲು
ಇಷ್ಟಪೆಡುವುದರಿಂದ ಜನರ ದೈಹಿಕ ಕಸರತ್ತು ಕಡಿಮೆಯಾಗಿ ವೈರಸ್ ಗಳು ವೃದ್ಧಿಯಾಗುತ್ತವೆ ಸೋಂಕಿತ ಚಳುವಳಿ ನೀಡುತ್ತವೆ ಈ ಕಾಲದಲ್ಲಿ ಎಣೆಯಲ್ಲ್ಣಿ ಕರಿದ ಕರುಕಲಿ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನಬಾರದು.

ಮುನ್ನೆಚ್ಚರಿಕೆ ಕ್ರಮಗಳು 
ತೀರಾ ನಸುಕಿನಲ್ಲಿ ವಾಕಿಂಗಿಗೆ ಹೋಗಬೇಡಿ. ಹಾಗೆಂದು ಸುಮ್ಮನೆ ಮಲಗಬೇಡಿ, ಚಳಿಗಾಲದಲ್ಲಿ ಕ್ರಿಯಾಶೀಲ ಶಿಸ್ತಿನ ಬದುಕು ನಿಮ್ಮದಾಗಲಿ. ಬೆಚ್ಚಗಿನ ಬಟ್ಟೆ ಧರಿಸಲು ಮರೆಯಬೇಡಿ, ಮಧುಮೇಹ, ರಕ್ತದ ಏರೊತ್ತಡ ನಿಯಂತ್ರಣದಲ್ಲಿಡಿ. ಶ್ವಾಸಕೋಶದ ಸೋಂಕುಗಳಿಗೆ ತಜ್ಞ ವೈದ್ಯರ ಸಲಹೆಯಂತೆ ಸಕಾಲ ಚಿಕಿತ್ಸೆ ಯನ್ನು ಪಡೆದುಕೊಳ್ಳಿ.

ಅತಿ ಹೆಚ್ಚಿನ ಬಳಲಿಕೆ, ಉಸಿರಾಡಲು ಸಾಧ್ಯವಾಗದೇ ಇರುವುದು, ಎದೆಯುರಿ ಮುಂತಾದ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೃದಯಾರೋಗಕ್ಕೆ ಲಘು ಆಹಾರ ಸೇವಿಸಿ, ಕೊಬ್ಬು, ಮದ್ಯ ಧೂಮಪಾನ ವರ್ಜಿಸಬೇಕು. ವ್ಯದ್ಯರ ಸಕಾಲಿಕ ಭೇಟಿ, ಸಮಾಲೋಚನೆ, ಸ್ತಿತ್ಯಂತರಗಳ ಪರಾಮರ್ಶೆ ಮಾಡಿ. ತೂಕದ ಬಗ್ಗೆ ನಿಗಾ ಇರಲಿ. ಹಬ್ಬದ ಸಾಲಿನ ಸಿಹಿ ಮಿತಿಯಾಗಿರಲಿ. ಶುದ್ದ ಹವೆ ತರೆದ ಕೋಣೆಯಲ್ಲಿನ ನಿದ್ದೆ ಉತ್ತಮ

error: Content is protected !!