ಮೈಸೂರು: ಸ್ಯಾಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿಯವರು ಹಲವರ ಹೆಸರು ಹೇಳಿದ್ದಾರೆ.
ಆ ಪಟ್ಟಿಯಲ್ಲಿ ಜಮೀರ್ ಹೆಸರು ಸಹ ಇದೆ. ಆದರೆ ಜಮೀರ್ನನ್ನು ಯಾಕೆ ಬಂಧಿಸಿಲ್ಲ. ಅಗತ್ಯವಿದ್ದರೆ ಸಂಬರಗಿಯನ್ನೂ ವಿಚಾರಣೆ ಮಾಡಲಿ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಪ್ರಕರಣದಲ್ಲಿ ರಾಜಕೀಯ ಪ್ರಭಾವ ಇರುವುದು ಸತ್ಯ. ಆದರೆ, ಗೃಹಸಚಿವರು ಯಾವುದೇ ಪ್ರಭಾವಕ್ಕೆೆ ಮಣಿಯಲ್ಲ. ಬಸವರಾಜ ಬೊಮ್ಮಾಯಿ ಮಾತಿನ ಮೇಲೆ ನಂಬಿಕೆ ಇದೆ ಎಂದು ಇದೇ ವೇಳೆ ತಿಳಿಸಿದರು.