ಮೈಸೂರು: ನಿದ್ದೆಯಲ್ಲಿರುವುದು ರಾಜ್ಯ ಸರ್ಕಾರವಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಇಷ್ಟು ದಿನ ಮಲಗಿದ್ದರು. ವಿಪಕ್ಷ ನಾಯಕನೆಂದು ತೋರಿಸಿಕೊಳ್ಳಲು ಟ್ವೀಟ್ ಮಾಡುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಾಲೆಳೆದರು.
ಟ್ವೀಟ್ ಮಾಡುವುದಕ್ಕೆ ಸರ್ಕಾರ ಸವಲತ್ತು ನೀಡಬೇಕಾ ? ಐದು ವರ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದೇನು ? ವಿಪಕ್ಷ ನಾಯಕ ಸಿದ್ದರಾಮಯ್ಯ ಎಲ್ಲಿ ಟೂರ್ ಮಾಡಿದ್ದಾರೆ? ಯಾರೋ ಬಂದು ತಿವಿದಾಗ ಅವರು ಟ್ವೀಟ್ ಮಾಡುತ್ತಾರೆ.
ಸಿದ್ದರಾಮಯ್ಯ ಟ್ವೀಟ್ ಮಾಡದಿದ್ದರೆ ಕಾಂಗ್ರೆಸ್ ಮರೆತು ಬಿಡುತ್ತೆ ಎಂದು ಲೇವಡಿ ಮಾಡಿದರು.