ಚಿಕ್ಕಮಗಳೂರು: ಜಮೀರ್ ಮುಖ್ಯಮಂತ್ರಿ ಮನೆ ವಾಚ್ಮನ್ ಆಗಬೇಕಿತ್ತು. ಮಾತಿಗೆ ತಕ್ಕಂತೆ ವಾಚ್ಮನ್ ಆಗಬೇಕಿತ್ತು. ಅವರು ಹೇಳಿದಂತೆ ನಡೆಯಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ತಮ್ಮದೇ ಮಾತಿನ ಬಗ್ಗೆೆ ಜಮೀರ್ ಸ್ಪಷ್ಟತೆ ಕೊಟ್ಟಿಲ್ಲ. ಆಸ್ತಿ ಬರೆದುಕೊಡ್ತೀನಿ ಅನ್ನುವುದು ಪ್ರಚಾರ ಮಾತ್ರ. ಜಮೀರ್ ಆಸ್ತಿ ಬರೆಯಲಿ, ಬಿಡಲಿ. ಡ್ರಗ್ ದಂಧೆ ಬೇರು ಸಹಿತ ಕಿತ್ತು ಹಾಕ್ತೀವಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.