ಕಳಕಳಿ ಅಕ್ಷಯ ಕುಮಾರ್ ಮುದ್ದಾ ಒಂದು ಸಮೃದ್ಧ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಭಾಷೆ ಅತ್ಯಂತ ಪ್ರಭಾವಶಾಲಿ ಯಾಗಿರಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ, ಆಡುವ ಭಾಷೆ ಕನ್ನಡ. ಆದರೆ ಬರೆಯುವ, ಓದುವ, ಕಲಿಯುವ ಬುನಾದಿ ಶಿಕ್ಷಣವೂ ಕನ್ನಡದ್ದೇ ಆಗಿರಬೇಕಲ್ಲವೇ? ಮಾತೃಭಾಷೆ ಎಂಬುದು ಕನಿಷ್ಠಪಕ್ಷ 5ನೇ ತರಗತಿ ಯವರೆಗಾದರೂ ಕಡ್ಡಾಯವಾದರೆ ಮಕ್ಕಳಿಗೆ ತಮ್ಮ ತಾಯ್ನಾಡಿನ ಭಾಷೆಯ ಅರಿವು ಮೂಡಲು ಸಾಧ್ಯ. ಏಕೆಂದರೆ, ಇಂಗ್ಲಿಷ್ ವ್ಯಾಮೋಹವಿಂದು ಪ್ರತಿಷ್ಠೆಯಾಗಿ ಪರಿಣಮಿಸಿದೆ. ಪೋಷಕರು ಎಲ್ಕೆಜಿ ಹಂತದಿಂದಲೇ ಆಂಗ್ಲಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು […]