Friday, 18th October 2024

ಬಲಾತ್ಕಾರ ಪ್ರಕರಣ: ಇಬ್ಬರು ಶಿಕ್ಷಕರಿಗೆ ಜೀವಾವಧಿ ಶಿಕ್ಷೆ

ಕೋಲ್ಕತ್ತಾ: ಅಲಿಪುರನ ಒಂದು ಶಾಲೆಯಲ್ಲಿ 2017 ರಲ್ಲಿ 4 ವರ್ಷದ ಬಾಲಕಿಯ ಮೇಲೆ ಬಲಾತ್ಕಾರ ಮಾಡಿರುವ ಪ್ರಕರಣದಲ್ಲಿ ಮಹಮ್ಮದ ಮೊಫಿಜುಲ್ ಮತ್ತು ಅಭಿಷೇಕ ರಾಯ್ ಇಬ್ಬರು ಶಿಕ್ಷಕರನ್ನು ಅಲಿಪುರ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಜೊತೆಗೆ 50 ಸಾವಿರ ರೂಪಾಯಿಗಳ ದಂಡವನ್ನು ಕೂಡ ವಿಧಿಸಿದ್ದು, ಈ ಮೊತ್ತವನ್ನು ಸಂತ್ರಸ್ತೆಗೆ ನೀಡಲಾಗುವುದು. ಈ ಇಬ್ಬರೂ ನರಾಧಮ ಶಿಕ್ಷಕರು ಬಾಲಕಿಯನ್ನು ಶಾಲೆಯ ಸ್ವಚ್ಛತಾಗೃಹಕ್ಕೆ ಕರೆದೊಯ್ದು, ಅಲ್ಲಿ ಬಲಾತ್ಕಾರ ಮಾಡಿದ್ದರು. ಈ ಘಟನೆ ಬೆಳಕಿಗೆ ಬಂದ ಕೂಡಲೇ ಶಾಲೆಯು ಈ ಇಬ್ಬರನ್ನು ಕೆಲಸದಿಂದ ತೆಗೆದುಹಾಕಿದ್ದರು. ಈ ಮೊಕದ್ದಮೆ ನಡೆಯುತ್ತಿರುವಾಗ ಸಂತ್ರಸ್ತೆಯ ತಂದೆಯ ನೌಕರಿಯೂ ಹೋಗಿತ್ತು. ಆದರೂ ಬಾಲಕಿಯ ತಂದೆ ಹಿಂಜರಿಯದೇ ಶ್ರಮ ಪಟ್ಟು ಪಟ್ಟು ಹಿಡಿದು ಹೋರಾಡಿದರು.