Friday, 18th October 2024

ಯುವನಟ ಸತೀಶ್​ ವಜ್ರ ಬರ್ಬರ ಹತ್ಯೆ

ಬೆಂಗಳೂರು: ಮಂಡ್ಯ ಮೂಲದ ಯುವನಟ ಸತೀಶ್​ ವಜ್ರ ಅವರನ್ನು ಶುಕ್ರವಾರ ರಾತ್ರಿ ಹತ್ಯೆ ಮಾಡಲಾಗಿದೆ.

3 ತಿಂಗಳ ಹಿಂದಷ್ಟೇ ಇವರ ಪತ್ನಿ ಆತ್ಮಹತ್ಯಗೆ ಶರಣಾಗಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಕಿರುಚಿತ್ರಗಳ ಮೂಲಕ ಫೇಮಸ್ ಆಗಿದ್ದ ಸತೀಶ್ ವಜ್ರ, ‘ಲಗೋರಿ’ ಎಂಬ ಕಿರುಚಿತ್ರದ ಮೂಲಕ ಜನರ ಗಮನ ಸೆಳೆದಿದ್ದರು. ಕ್ರಶ್​’ ಕಿರುಚಿತ್ರಕ್ಕೂ ಬಣ್ಣಹಚ್ಚಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲೇ ದುಷ್ಕರ್ಮಿ ಗಳು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ಮೂಲದ ಸತೀಶ್​ ಅವರು ಯುವತಿಯೊಬ್ಬಳನ್ನು ಪ್ರೀತಿಸಿ ವಿವಾಹ ಆಗಿದ್ದರು. ಕೆಲ ತಿಂಗಳ ಹಿಂದೆ ಸತೀಶ್​ರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಸತೀಶ್​ ಬರ್ಬರವಾಗಿ ಕೊಲೆಯಾಗಿದ್ದು, ಇವರ ಪತ್ನಿಯ ಸಹೋದರನ ಮೇಲೆ ಅನುಮಾನ ಮೂಡಿದೆ.

ಆರ್.ಆರ್ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.