Sunday, 8th September 2024

ಅಂಗನವಾಡಿ ಕೇಂದ್ರದಕ್ಕೆ ತಹಶಿಲ್ದಾರ ಭೇಟಿ, ಪರಿಶೀಲನೆ

ಕೊಲ್ಹಾರ:ತಾಲ್ಲೂಕಿನ ಹಿರೇ ಗರಸಂಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಸರಕಾರದಿಂದ ಬರುವ ಸಾಮಾಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ ಎಂಬ ದೂರು ಬಂದ ಹಿನ್ನೆಲೆಯಲ್ಲಿ ತಹಶಿಲ್ದಾರ ಪಿ ಜಿ ಪವಾರ್ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮದ ಭಾಗ್ಯಶ್ರೀ ಚಲವಾದಿ ಎಂಬ ಮಹಿಳೆ ತಹಶಿಲ್ದಾರ ಅವರಿಗೆ ಲಿಖಿತ ದೂರು ನೀಡಿರುವ ಹಿನ್ನೆಲೆಯಲ್ಲಿ ತಹಶಿಲ್ದಾರ ಪಿ ಜಿ ಪವಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ದರು. ಬಾಣಂತಿ ಮಹಿಳೆಯರಿಗೆ ಸರಕಾರದಿಂದ ಅಂಗನವಾಡಿ ಮೂಲಕ ಅನೇಕ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತದೆ ಆದರೆ ಹಿರೇ ಗರಸಂಗಿ ಗ್ರಾಮದ ಅಂಗನ ವಾಡಿ ಕೇಂದ್ರದ ಕಾರ್ಯಕರ್ತೆ ಸಾಮಗ್ರಿ ಗಳನ್ನು ಸಮರ್ಪಕವಾಗಿ ವಿತರಿಸುತ್ತಿಲ್ಲ ಈ ಬಗ್ಗೆ ಪ್ರಶ್ನಿಸಲಾಗಿ ಸಮರ್ಪಕವಾಗಿ ಉತ್ತರ ನೀಡದ ಕಾರಣ ತಹಶಿಲ್ದಾರ ಅವರ ಗಮನಕ್ಕೆ ತರಲಾಗಿದೆ ಎಂದು ಜಯಶ್ರೀ ಚಲವಾದಿ ವಿಶ್ವವಾಣಿಗೆ ತಿಳಿಸಿದರು.

ಈ ಬಗ್ಗೆ ತಹಶಿಲ್ದಾರ ಪಿ ಜಿ ಪವಾರ್ ಅವರನ್ನು ಸಂಪರ್ಕಿಸಲಾಗಿ ದೂರು ಆಧರಿಸಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಸ್ಥಾನಿಕ ಪರಿಶೀಲನೆ ನಡೆಸಿದ್ದೆನೆ ಮುಂದಿನ ಕ್ರಮಕ್ಕೆ ಇಲಾಖೆಯ ಮೇಲ್ವಿಚಾರಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಸುರಪೂರ್ ಅವರನ್ನು ಸಂಪರ್ಕಿಸಲಾಗಿ ದೂರು ಆಧರಿಸಿ ನೋಟೀಸ್ ನೀಡಲಾಗಿದೆ ಸ್ಪಷ್ಟನೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು.

error: Content is protected !!