ನವದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಗುರುವಾರ ನಿಧನ ಹೊಂದಿದ್ದಾರೆ (Sitaram Yechury Death). ಅವರಿಗೆ 72 ವರ್ಷ ವಯಸ್ಸಾಗಿತ್ತು. ಆಗಸ್ಟ್ 19 ರಂದು ಅವರನ್ನು ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು. ಉಸಿರಾಟದ ಸೋಂಕಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಉಸಿರಾಟದ ಬೆಂಬಲ ವ್ಯವಸ್ಥೆಯಲ್ಲಿದ್ದರು. ಮೂಲಗಳ ಪ್ರಕಾರ, ಹಿರಿಯ ನಾಯಕ ಮಧ್ಯಾಹ್ನ 3.05 ಕ್ಕೆ ನಿಧನರಾದರು.
Emergency to right-wing communal forces, Comrade #sitaramyechuri Yechury was a fighter to remember.
— Sanjay Kishore (@saintkishore) September 12, 2024
It was following a protest led by Yechury in 1978 that Indira Gandhi resigned as JNU Chancellor – an iconic photo of Indira listening to Yechury when he read out a chargesheet. pic.twitter.com/1ti9aG5Sjw
32 ವರ್ಷಗಳ ಕಾಲ ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು ಮತ್ತು 2015 ರಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾದರು. 2005 ರಿಂದ 2017 ರವರೆಗೆ ಅವರು ರಾಜ್ಯಸಭೆಯಲ್ಲಿ ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸಿದರು.
ಆಗಸ್ಟ್ 12, 1952 ರಂದು ಚೆನ್ನೈನಲ್ಲಿ ಜನಿಸಿದ ಯೆಚೂರಿ ಯೆಚೂರಿ ಸೀತಾರಾಮ ರಾವ್, ಸರ್ವೇಶ್ವರ ಸೋಮಯಾಜಲು ಯೆಚೂರಿ ಮತ್ತು ಕಲ್ಪಕಂ ಎಂಬ ವೈದೇಹಿ ಬ್ರಾಹ್ಮಣ ದಂಪತಿಗಳ ಪುತ್ರ. ಜಾತಿ ಆಧಾರಿತ ಉಪನಾಮವನ್ನು ತ್ಯಜಿಸಲು ನಿರ್ಧರಿಸಿ ಹೆಸರು ಬದಲಿಸಿಕೊಂಡರು. ಮೊಟ್ಟ ಮೊದಲ ಸಿಪಿಎಂ ಪ್ರಧಾನ ಕಾರ್ಯದರ್ಶಿ ಪಿ ಸುಂದರಯ್ಯ ಅವರಿಂದ ಸ್ಫೂರ್ತಿ ಪಡೆದು ಸೀತಾರಾಮ್ ಯೆಚೂರಿ ಆದರು. ಅವರು ತಮ್ಮ ಸುಂದರ ರಾಮ ರೆಡ್ಡಿ ಎಂಬ ಹೆಸರನ್ನು ಬದಲಾಯಿಸಿಕೊಂಡಿದ್ದರು. ಸುಂದರಯ್ಯ ಅವರ ಹೆಜ್ಜೆಗಳನ್ನು ಅನುಸರಿಸಿದ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲಂಕರಿಸಿದ ಆಂಧ್ರಪ್ರದೇಶದ ಎರಡನೇ ನಾಯಕರಾದರು.
ಯೆಚೂರಿ ಅವರ ತಂದೆ ಅಪ್ಪ ಅಂದರೆ ಅಜ್ಜ ಯೆಚೂರಿ ಸೀತಾರಾಮ ರಾವ್ ಆಂಧ್ರಪ್ರದೇಶದ ಪೂರ್ವ ಗೋದಾವರಿಯಲ್ಲಿ ತಹಶೀಲ್ದಾರ್ ಆಗಿದ್ದರು. ಅವರ ತಾಯಿಯ ಅಪ್ಪ ಕಂದಾ ಭೀಮಾ ಶಂಕರರಾಮ್ ಅವರು ಆಂಧ್ರಪ್ರದೇಶ ಹೈಕೋರ್ಟ್ನಲ್ಲಿ ನ್ಯಾಯಾಧೀಶರಾಗುವ ಮೊದಲು ಮದ್ರಾಸ್ ಹೈಕೋರ್ಟ್ನಲ್ಲಿ ವಕೀಲರಾಗಿದ್ದರು. ಆಂಧ್ರಪ್ರದೇಶ ಹೈಕೋರ್ಟ್ ಗುಂಟೂರಿನಿಂದ ಹೈದರಾಬಾದ್ಗೆ ಸ್ಥಳಾಂತರಗೊಂಡ ನಂತರ, ಯೆಚೂರಿ ತಮ್ಮ ಆರಂಭಿಕ ಶಿಕ್ಷಣದ ಹೆಚ್ಚಿನ ಭಾಗವನ್ನು ಹೈದರಾಬಾದ್ನಲ್ಲಿ ಕಳೆದಿದ್ದರು.
ಅವರ ತಂದೆ ಆಂಧ್ರ ರಸ್ತೆ ಸಾರಿಗೆ ನಿಗಮದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕಾರಣ, ಯೆಚೂರಿ ಆಗಾಗ್ಗೆ ಶಾಲೆಗಳನ್ನು ಬದಲಾಯಿಸಬೇಕಾಗಿತ್ತು. ವಿಜಯವಾಡದ ರೈಲ್ವೆ ಶಾಲೆಗೆ ಮತ್ತು ನಂತರ ಹೈದರಾಬಾದ್ನ ಆಲ್ ಸೇಂಟ್ಸ್ ಶಾಲೆಗೆ ಸೇರಿದ್ದರು. ಯೆಚೂರಿ ಹೈದರಾಬಾದ್ನ ನಿಜಾಮ್ ಕಾಲೇಜಿನಲ್ಲಿ ಪದವಿಪೂರ್ವ ಕೋರ್ಸ್ (ಪಿಯುಸಿ) ಓದುತ್ತಿದ್ದಾಗ, ತೆಲಂಗಾಣ ಆಂದೋಲನವು 1967-68 ರಲ್ಲಿ ಉತ್ತುಂಗಕ್ಕೇರಿತು. ರಾಜಕೀಯ ಅಶಾಂತಿಯು ಇಡೀ ವರ್ಷ ಅವರ ಅಧ್ಯಯನಕ್ಕೆ ಅಡ್ಡಿಪಡಿಸಿತ್ತು.
ದೆಹಲಿಗೆ ಸ್ಥಳಾಂತರ
ಸೀತಾರಾಮ್ ಯೆಚೂರಿ ಕುಟುಂಬವು ದೆಹಲಿಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಅವರು ರಾಷ್ಟ್ರಪತಿಗಳ ಎಸ್ಟೇಟ್ ಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತಶಾಸ್ತ್ರದಲ್ಲಿ ಒಂದು ವರ್ಷದ ಹೈಯರ್ ಸೆಕೆಂಡರಿ ಕೋರ್ಸ್ ಪೂರ್ಣಗೊಳಿಸಿದ್ದರು.
ಇದನ್ನೂ ಓದಿ: Padma Awards: ಪದ್ಮ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲು ಸೆ.15 ಕೊನೆಯ ದಿನ
ಯಚೂರಿ ಅವರ ಶೈಕ್ಷಣಿಕ ಪ್ರಯಾಣವು ಅವರನ್ನು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿಗೆ ಕರೆದೊಯ್ಯಿತು. ಅಲ್ಲಿ ಅವರು ಅರ್ಥಶಾಸ್ತ್ರದಲ್ಲಿ ಬಿಎ ಪದವಿ ಪಡೆದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆಯುತ್ತಿದ್ದ ಅವಧಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ಹೀಗಾಗಿ ನಾಯಕತ್ವದ ಕೌಶಲ್ಯಗಳು ಮುನ್ನೆಲೆಗೆ ಬಂದವು.
ತುರ್ತು ಪರಿಸ್ಥಿತಿಯ ವರ್ಷಗಳಲ್ಲಿ, ಜೆಎನ್ಯು ವಿದ್ಯಾರ್ಥಿ ಸಂಘಟನೆಗಳ ಕ್ರಿಯಾಶೀಲತೆಯ ಕೇಂದ್ರವಾಯಿತು. ಮೇನಕಾ ಆನಂದ್ (ನಂತರ ಮೇನಕಾ ಗಾಂಧಿ) ಜೆಎನ್ಯುನ ಸ್ಕೂಲ್ ಆಫ್ ಲ್ಯಾಂಗ್ವೇಜಸ್ಗೆ ಪ್ರವೇಶ ಪಡೆಯುವುದನ್ನು ವಿರೋಧಿಸಿದ್ದಕ್ಕಾಗಿ ಯೆಚೂರಿ ಮತ್ತು ಇತರರು ಜೈಲು ಸೇರಿದ್ದರು
1984 ರಲ್ಲಿ ಯೆಚೂರಿ ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ (ಎಸ್ಎಫ್ಐ) ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದೇ ವರ್ಷ ಪ್ರಕಾಶ್ ಕಾರಟ್ ಅವರೊಂದಿಗೆ ಅವರು ಸಿಪಿಎಂ ಕೇಂದ್ರ ಸಮಿತಿಗೆ ಕಾಯಂ ಆಹ್ವಾನಿತರಾದರು. ಮುಂದಿನ ವರ್ಷದ ಹೊತ್ತಿಗೆ ಯೆಚೂರಿ, ಕಾರಟ್ ಮತ್ತು ಎಸ್ ರಾಮಚಂದ್ರನ್ ಪಿಳ್ಳೈ ಅವರನ್ನು ಪಕ್ಷದ ಕೇಂದ್ರ ಸಮಿತಿಯ ಪೂರ್ಣ ಸದಸ್ಯರಾಗಿ ಸೇರಿಸಿಕೊಳ್ಳಲಾಯಿತು, ಮೂವರೂ 1992 ರಲ್ಲಿ ಪೊಲಿಟ್ ಬ್ಯೂರೋ ತಲುಪಿದ್ದರು.
1996 ರಲ್ಲಿ, ಯೆಚೂರಿ ಅವರು ಪಿ ಚಿದಂಬರಂ ಮತ್ತು ಎಸ್ ಜೈಪಾಲ್ ರೆಡ್ಡಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದ ಅವರು ಯುಪಿಎ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2004 ರಲ್ಲಿ, ಅವರು ಜೈರಾಮ್ ರಮೇಶ್ ಅವರೊಂದಿಗೆ ಯುಪಿಎ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ರಚಿಸಿದರು.