Thursday, 19th September 2024

ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ ಇನ್ನಿಲ್ಲ

ತಿರುವನಂತಪುರ: ಕಥಕ್ಕಳಿ ಕಲಾವಿದ ನೆಲ್ಲಿಯೋಡು ವಾಸುದೇವನ್ ನಂಬೂತಿರಿ (81) ತಮ್ಮ ನಿವಾಸದಲ್ಲಿ ಸೋಮವಾರ ರಾತ್ರಿ ನಿಧನರಾದರು. ‘ಕೆಲವು ಸಮಯದಿಂದ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು’ ಎಂದು ಮೂಲಗಳು ಹೇಳಿವೆ. ಶಾಸ್ತ್ರೀಯ ನೃತ್ಯ ನಾಟಕದಲ್ಲಿ ಖಳನಾಯಕನಂತಹ ‘ಚುವಣ್ಣ ತಡಿ’ (ಕೆಂಪು ಗಡ್ಡ) ಪಾತ್ರಗಳಿಂದ ಖ್ಯಾತಿ ಗಳಿಸಿದ್ದರು. ‘ವಟ್ಟಮುಡಿ’ ಮತ್ತು ‘ಪೆಂಕರಿ’ ಅಂತಹ ಪಾತ್ರಗಳನ್ನು ನಿರ್ವಹಿಸುವಲ್ಲಿ ಪರಿಣಿತಿಯನ್ನು ಪಡೆದಿದ್ದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕೇರಳ ರಾಜ್ಯ ಕಥಕ್ಕಳಿ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದರು. […]

ಮುಂದೆ ಓದಿ

ನೇಪಾಳದಲ್ಲಿ ಭಾರಿ ಮಳೆ, ಮೇಘಸ್ಫೋಟ: ಏಳು ಮಂದಿ ಸಾವು

ಕಠ್ಮಂಡು: ನೇಪಾಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಮೇಘಸ್ಫೋಟ ದಿಂದ ದಿಢೀರ್ ಪ್ರವಾಹ ಉಂಟಾಗಿದ್ದು, ಈ  ದುರಂತದಲ್ಲಿ 7 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೇಂದ್ರ ನೇಪಾಳದ...

ಮುಂದೆ ಓದಿ

ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್ ಇನ್ನಿಲ್ಲ

ಕೋಝಿಕ್ಕೋಡು: ಕಥಕ್ಕಳಿ ಮಾಂತ್ರಿಕ ಚೆಮಂಚೇರಿ ಕುನ್ಹಿರಾಮನ್ ನಾಯರ್(105) ಸೋಮವಾರ ಕೇರಳದ ಕೋಝಿಕ್ಕೋಡು ಜಿಲ್ಲೆಯಲ್ಲಿರುವ ಕೊಯಿಲಾಂಡಿ ಸಮೀಪ ಚೆಲಿಯಾನಲ್ಲಿ ನಿಧನರಾದರು. 90 ವರ್ಷದವರೆಗೂ ಕಥಕ್ಕಳಿ ನೃತ್ಯ ಮಾಡುತ್ತಿದ್ದ ಅವರ...

ಮುಂದೆ ಓದಿ