ಮಾನ್ವಿ: ಪಟ್ಟಣದ ಸಿಂಧನೂರು ರಸ್ತೆಯಲ್ಲಿರುವ ನಮಾಜಗೇರಿ ಗುಡ್ಡದ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂದವರು ಸಾಮೂಹಿಕವಾಗಿ ಈದುಲ್ ಫಿತರ್ ನಮಾಜ ಪ್ರಾರ್ಥನೆಯನ್ನು ಸಲ್ಲಿಸಿದರು.
ಮುಸ್ಲಿಂ ಸಮಾಜದ ಧರ್ಮಗುರು ಖತೀಬ್ ಮುಪ್ತಿ ಮೌಲನಾ ಸೈಯಾದ್ ಜಿಶಾನ್ ಖಾದ್ರಿ ರವರು ೨ ರಾಕತ ನಮಾಜ್ ಭೋದಿಸಿ ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿ ರಂಜಾನ್ ಹಬ್ಬದ ಸಂದೇಶ ನೀಡಿ ದೇಶದಲ್ಲಿ ಅಲ್ಲಾಹನ ಕೃಪೆಯಿಂದ ಶಾಂತಿ,ಸುವ್ಯವಸ್ಥೆ, ಸುರಕ್ಷತೆ, ಸೌಹಾರ್ಧತೆ ನೆಲೆಸಲಿ ನಾವೇಲ್ಲರು ಒಂದೇ ಎನ್ನುವ ಭಾವನೆ ಪ್ರತಿಯೊಬ್ಬರಲ್ಲಿ ಮೂಡಲಿ ಎಂದು ಕೋರಿದರು.
ಅನ್ವರ್ ಪಾಷ ಉಮ್ರಿ ಕುತುಬಾ ಪಠಣವನ್ನು ಮಾಡಿದರು. ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂದವ ರಿಗೆ ಶುಭಾಶಯ ಕೋರಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ ಮಹಮ್ಮದ್ ಫೈಗಂಬರರು ದಯೆಯು ಪ್ರತಿಯೊಬ್ಬರ ನಂಬಿಕೆಯ ಸಂಕೇತವಾಗಿದೆ ಎಂದು ಭೋದಿಸಿದ್ದಾರೆ ಅವರ ತತ್ವ ಆದರ್ಶಗಳನ್ನು ಪ್ರತಿಯೊ ಬ್ಬರು ಪಾಲಿಸುವ ಮೂಲಕ ಇಡೀ ಜಗತ್ತಿನಲ್ಲಿ ಶಾಂತಿ,ಸೌಹಾರ್ಧತೆ ನೆಲೆಸುವಂತೆ ಮಾಡೊಣ ಎಂದು ತಿಳಿಸಿ ದರು.
ಮಾಜಿ ಶಾಸಕ ಹಂಪಯ್ಯ ಸಾಹುಕಾರ್, ತಹಸೀಲ್ದಾರ್ ಚಂದ್ರಕಾAತ್ ಎಲ್.ಡಿ, ಈದ್ಗಾ ಕಮಿಟಿಯ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಉಪಾ ಧ್ಯಕ್ಷರಾದ ಸೈಯಾದ್ ಅಕ್ಬರ್ ಪಾಷ,ಮಹಮ್ಮದ್ ಇಸ್ಮಾಯಿಲ್,ಕಾರೀಂ ಖಾನ್,ಮೌಲಾನ ನಾಯಕ್, ಶೇಖಫಾರೀದ್ ಉರ್ಮಿ, ಮುಖಂಡರಾದ ರಾಜಾ ರಾಮಚಂದ್ರನಾಯಕ, ಜೆ.ಡಿ.ಎಸ್.ತಾ.ಅಧ್ಯಕ್ಷ ಟಿ.ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ,ರವಿಭೋಸರಾಜ, ಪುರಸಭೆ ಸದಸ್ಯರಾದ ರೇವಣ ಸಿದ್ದಯ್ಯ ಸ್ವಾಮಿ, ಶರಣಪ್ಪ ಮೇದಾ, ಮುಖಂಡರಾದ ಸಬ್ಜಲಿಸಾಬ್, ಮಹ್ಮದ್ ಮುಜೀಬ್, ವಸಂತ ನಾಯಕ, ,ಖಲೀಲ್ ಕುರೇಷಿ ಸೇರಿದಂತೆ ಇನ್ನಿತರರು ಇದ್ದರು.