ಚಿಕ್ಕನಾಯಕನಹಳ್ಳಿ : ಯುವಕನೊರ್ವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ.
ಕುರುಬರಹಳ್ಳಿಯ ಸತೀಷ್ (೩೪) ಮೃತಪಟ್ಟ ಯುವಕ. ಮೃತರು ಪಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದರು. ಕೆರೆಗೆ ನೀರು ಕುಡಿ ಯಲು ಹೋದ ಸಂದರ್ಭದಲ್ಲಿ ಪಿಟ್ಸ್ ಬಂದು ಕಾಲು ಜಾರಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.