Sunday, 28th April 2024

‘ರಾಮ್ ಲಲ್ಲಾ’ ಪ್ರತಿಷ್ಠಾಪನಾ ಸಮಾರಂಭಕ್ಕೆ ಆಹ್ವಾನ ಪತ್ರಗಳ ವಿತರಿಸುವ ಪ್ರಕ್ರಿಯೆ ಪ್ರಾರಂಭ

ವದೆಹಲಿ : ಜನವರಿ 22, 2024ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಉದ್ಘಾಟನೆಗೆ ಮುಂಚಿತವಾಗಿ, ‘ರಾಮ್ ಲಲ್ಲಾ’ ಪ್ರತಿಷ್ಠಾಪನಾ ಸಮಾರಂಭಕ್ಕೆ ಜನರಿಗೆ ಆಹ್ವಾನ ಪತ್ರಗಳನ್ನ ವಿತರಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಶ್ರೀರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕಳುಹಿಸುತ್ತಿರುವ ಪತ್ರಗಳನ್ನ ಸಾಮಾಜಿಕ ಮಾಧ್ಯಮಗಳಲ್ಲಿನ ದೃಶ್ಯಗಳು ತೋರಿಸಿವೆ. ಅಯೋಧ್ಯೆಯಲ್ಲಿ ನಡೆಯ ಲಿರುವ ‘ಪ್ರಾಣ ಪ್ರತಿಷ್ಠಾಪನೆ’ (ಪ್ರತಿಷ್ಠಾಪನಾ ಸಮಾರಂಭ)ದಲ್ಲಿ ಭಾಗವಹಿಸಲು ಸುಮಾರು 6,000 ಜನರಿಗೆ ಪತ್ರಗಳನ್ನ ಕಳುಹಿಸಲಾಗುವುದು.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಗಣ್ಯರು ರಾಮ ಮಂದಿರದ ಭವ್ಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಟ್ರಸ್ಟ್ ಕಳುಹಿಸಿದ ಮೊದಲ ಪತ್ರವನ್ನ ಸ್ವೀಕರಿಸಿದ್ದೇನೆ ಎಂದು ಸಂತರೊಬ್ಬರು ತಿಳಿಸಿದ್ದಾರೆ. ಅವರು ಅಂಚೆ ಮೂಲಕ ಪತ್ರವನ್ನ ಪಡೆದಿದ್ದು, ಆಹ್ವಾನ ಪತ್ರವನ್ನ ಹೊಂದಿರುವ ಮೊದಲ ವ್ಯಕ್ತಿಯಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.

ದೇವಾಲಯದ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು, ರಾಮ್ ಲಲ್ಲಾದ ಮೂರು ಆವೃತ್ತಿಗಳನ್ನ ತಯಾರಿಸಲಾಗುತ್ತಿದೆ, ಅವುಗಳಲ್ಲಿ ಅತ್ಯುತ್ತಮ ವಾದವುಗಳನ್ನ ಉದ್ಘಾಟನಾ ದಿನಾಂಕದ ಸಮೀಪದಲ್ಲಿ ಆಯ್ಕೆ ಮಾಡಲಾಗುವುದು ಎಂದು ವರದಿಯಾಗಿದೆ. ರಾಮ್ ಲಲ್ಲಾದ ಮೂರು ಆವೃತ್ತಿಗಳನ್ನ ಯಾರಿಗೂ ಹೋಗಲು ಅವಕಾಶವಿಲ್ಲದ ಸ್ಥಳದಲ್ಲಿ ತಯಾರಿಸಲಾಗುತ್ತಿದೆ.

ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಖಜಾಂಚಿ ಸ್ವಾಮಿ ಗೋವಿಂದ್ ದೇವ್ ಗಿರಿ ಮಹಾರಾಜ್, “2024ರ ಜನವರಿ ಮೂರನೇ ವಾರದಲ್ಲಿ, ರಾಮ್ ಲಲ್ಲಾ (ಶಿಶು ರಾಮ) ವಿಗ್ರಹವನ್ನು ಅದರ ಮೂಲ ಸ್ಥಳದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈಯಲ್ಲಿ ಸ್ಥಾಪಿಸಲಾಗುವುದು” ಎಂದು ತಿಳಿಸಿದರು.

ಕಳೆದ ತಿಂಗಳು, ಟ್ರಸ್ಟ್, ರಾಮ ಮಂದಿರದ ಗ್ರೌಂಡ್ ವರ್ಕ್ ಚಿತ್ರಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇನ್ನು ಆಗಸ್ಟ್ 5, 2020ರಂದು ಪ್ರಧಾನಿ ಮೋದಿ ಅವರು ದೇವಾಲಯದ ಅಡಿಪಾಯ ಹಾಕಿದ್ದರು.

Leave a Reply

Your email address will not be published. Required fields are marked *

error: Content is protected !!