ಶಿರಸಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಪವಾರ್ ಅವರ ಮಾತಿಗೆ ಕವಡೆ ಕಾಸಿನಷ್ಟೂ ಕಿಮ್ಮತ್ತಿನ್ನು ಕಾರವಾರ ಜನತೆ ಕೊಡುವುದಿಲ್ಲ.
ಕಾರವಾರ ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಮಾತು ಉದ್ದಟತನದಿಂದ ಕೂಡಿದ್ದು ಇದನ್ನು ಬಲವಾಗಿ ಖಂಡಿಸುತ್ತೇನೆ. ಕರ್ನಾಟಕದ ಒಂದಿಂಚು ಸ್ಥಳವನ್ನೂ ಕದಲಲು ನಾವು ಬಿಡುವುದಿಲ್ಲ ಎಂದು ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಅವರಿಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪವಾರ ಅವರ ಬೆಳಗಾವಿಹಾಗೂ ಕಾರವಾರ ತಮ್ಮದೆಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.