Sunday, 19th May 2024

ಹುಬ್ಬಳ್ಳಿ ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆ

ಹುಬ್ಬಳ್ಳಿ : ಬಿಜೆಪಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೈ ತಪ್ಪಿದಕ್ಕೆ ಬಂಡಾಯ ವೆದ್ದು ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಸೋಲಿಸಲು ಭಾರೀ ರಣತಂತ್ರ ರೂಪಿಸಲಾಗು ತ್ತಿದ್ದು, ಹುಬ್ಬಳ್ಳಿಯಲ್ಲಿ ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆಯಾಗಿ ದ್ದಾರೆ.

ಹುಬ್ಬಳ್ಳಿಯ ಶ್ರೀನಿವಾಸ್‌ ಗಾರ್ಡನ್‌ನಲ್ಲಿ ಹುಬ್ಬಳ್ಳಿ – ಧಾರವಾಡ ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆ ಗೊಂಡಿದ್ದಾರೆ. ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹಾದ್‌ ಜೋಶಿ ನೇತೃತ್ವದಲ್ಲಿ ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಇದೀಗ ಜಗದೀಶ್ ಶೆಟ್ಟರ್ ಕೌಂಟರ್‌ ಕೊಡಲು ಮಾಜಿ ಮೇಯರ್‌ ಪ್ರಕಾಶ್‌ ಕ್ಯಾರಕಟ್ಟಿ ಬಿಜೆಪಿ ಪಕ್ಷಕ್ಕೆ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲೇ ಸೇರ್ಪಡೆ ಮಾಡಲಾಗಿದೆ. ಇದರಿಂದ ಕಾಂಗ್ರೆಸ್‌ ಪಾಳಯಕ್ಕೆ ಮತ್ತೊಂದು ಬಿಸಿ ತಟ್ಟಿದಲ್ಲದೇ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರ್ಪಡೆ ಗೊಂಡ ಜಗದೀಶ್ ಶೆಟ್ಟರ್ ಶಾಕ್‌ ನೀಡಿದಂತಾಗಿದೆ.

error: Content is protected !!