ವಿಶ್ವವಾಣಿ ಸುದ್ದಿಮನೆ ಬೆಳಗಾವಿ
ಸರಕಾರ ಉರುಳಿಸುವ ಶಕ್ತಿಿ ಹೊಂದಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದ ಗ್ರಾಾಮಗಳಿಗೆ ಬಸ್ ಬಿಡಿಸುವ ಶಕ್ತಿಿ ಇಲ್ಲ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದರು.
ಕಾಂಗ್ರೆೆಸ್ ಲಖನ್ ಜಾರಕಿಹೊಳಿ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ, ರಮೇಶ್ ಜಾರಕಿಹೊಳಿ ವಿರುದ್ಧ. ರಮೇಶ್ ಜಾರಕಿಹೊಳಿ ಕೆಳಗಿದ್ದ ಬೆಂಬಲಿಗರು ಬೀಟ್ ಪೊಲೀಸರಿದ್ದ ಹಾಗೆ. ಈ ಬೀಟ್ ಪೊಲೀಸರು ಪಿಎಸ್ಐ ಅವರನ್ನು ಭೇಟಿ ಆಗೋಕೆ ಬಿಡೋದಿಲ್ಲ. ರಮೇಶ್ನ ಪರಿಸ್ಥಿಿತಿ ಕೂಡ ಹೀಗೆ ಇದೆ. ಯಾವುದೇ ಪಕ್ಷದ ಶಾಸಕರಾದವರು ಎಲ್ಲ ಜನರಿಗೆ ಸಿಗುವಂತಿರಬೇಕು. ಈಗ ಐದು ಊರಲ್ಲಷ್ಟೇ ರಮೇಶ್ ಆಪ್ತರು ಜಾಸ್ತಿಿ ಇದ್ದಾರೆ. ಉಳಿದ ಕಡೆ ಅವರನ್ನು ಮುಗಿಸಿದ್ದೇವೆ ಎಂದರು.
ರಮೇಶ್ ಜಾರಕಿಹೊಳಿ ಬಳಿ ಹೇಳಿಕೊಳ್ಳುವಂತಹ ಬ್ಯುಸಿನೆಸ್ ಇಲ್ಲ, ಸಮಾಜಸೇವೆಯನ್ನೂ ಮಾಡಲ್ಲ. ಆದರೂ ಬ್ಯುಸಿ ಇರ್ತಾರೆ. ಮಂತ್ರಿಿ ಆದಾಗ ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಲಿಲ್ಲ. ಲೂಟ್ ಮಾಡುವ ಗ್ಯಾಾಂಗ್ ಇಟ್ಟುಕೊಂಡಿದ್ದಾರೆ. ಅರ್ಧಪಾಲು ಇವರಿಗೆ, ಅರ್ಧಪಾಲು ಅವರಿಗೆ, ಮುಸ್ಲಿಿಮರಿಗೆ ಒಂದು ಶಾದಿಮಹಲ್ ಕಟ್ಟಲಿಕ್ಕೆೆ ಇವರಿಂದ ಆಗಲಿಲ್ಲ ಎಂದು ಟೀಕಿಸಿದರು.
ಬಿಎಸ್ವೈ ಬಿಟ್ರೆೆ ಬೇರೆ ಆಪ್ಷನ್ ಇಲ್ಲ
ಹಿಂದಿನ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಮೋದಿ, ಅಮಿತ್ ಷಾ ವಿರುದ್ಧ ವಾಗ್ದಾಾಳಿ ನಡೆಸಿದ್ದರು. ಮೋದಿ ಸಹ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಾಳಿ ನಡೆಸಿದ್ದರು. ಈಗ ಅಭಿವೃದ್ಧಿಿಗಾಗಿ ರಮೇಶ್ ಬಿಜೆಪಿಗೆ ಬಂದಿದ್ದೇನೆ ಅಂತಾರೆ. ಆದರೆ ಯಾರ ಅಭಿವೃದ್ಧಿಿ ಅಂತ ತಿಳಿಯುತ್ತಿಿಲ್ಲ. ರಮೇಶ್ ಜಾರಕಿಹೊಳಿ ಮನೆ ಮುಂದಿನ ರಸ್ತೆೆ ಮಾಡಲು ಐದು ವರ್ಷ ಬೇಕಾಯ್ತು. ಇನ್ನೂ ಅವರ ಮನೆಯ ಮುಂದಿನ ರಸ್ತೆೆ ಕಾಮಗಾರಿಯೇ ಮುಗಿದಿಲ್ಲ. ಬಿಎಸ್ವೈ ಬಿಟ್ರೆೆ ರಮೇಶ್ ಜಾರಕಿಹೊಳಿಗೆ ಬೇರೆ ಆಪ್ಷನ್ ಇಲ್ಲ. ಹೆಸರಿನಲ್ಲಿ ಚುನಾವಣಾ ಪ್ರಚಾರ ಮಾಡುತ್ತಿಿದ್ದಾರೆ ಎಂದು ಆರೋಪಿಸಿದರು. ರಮೇಶ್ ಜಾರಕಿಹೊಳಿ ಸೋಲಿಸುವುದೇ ನಮ್ಮ ಗುರಿ. ರಮೇಶ್ ಜಾರಕಿಹೊಳಿ ಗೆದ್ರೆೆ ಜಲಸಂಪನ್ಮೂಲ ಸಚಿವ, ಡಿಸಿಎಂ, ಉಸ್ತುವಾರಿ ಸಚಿವರು ಹೀಗೆ ಮೂರು ಲಾಭಗಳಾಗುತ್ತೆೆ ಎಂದು ಪ್ರಚಾರ ಮಾಡಲಾಯಿತು. ಆದರೆ ಇವರು ಉಸ್ತುವಾರಿ ಸಚಿವರಾದ್ರೆೆ ಜನರಿಗೇನೂ ಲಾಭವಿಲ್ಲ. ಈ ಹಿಂದೆ ಎರಡು ಬಾರಿ ಸಚಿವರಾಗಿದ್ದರಲ್ಲ ಆಗ ಏನು ಅಭಿವೃದ್ಧಿಿ ಮಾಡಿದ್ದಾರೆ ಎಂದು ಪ್ರಶ್ನಿಿಸಿದರು.