ಬೆಳಗಾವಿ: ಹಿರಿಯ ಪತ್ರಕರ್ತ ಕನ್ನಡ ಹೋರಾಟಗಾರ ರಾಘವೇಂದ್ರ ಜೋಶಿ ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
ಸೋಮವಾರ ಬೆಳಿಗ್ಗೆ ವಾಕಿಂಗ್ ಮುಗಿಸಿ ಮನೆಗೆ ಮರಳುತ್ತಲೇ ಕುಸಿದು ಬಿದ್ದ ಅವರು ಹೃದಯಾಘಾತದಿಂದ ಕೊನೆಯುಸಿರೆಳೆ ದರು. ಅವರಿಗೆ ಇದೇ ಡಿಸೆಂಬರ್ 8 ರಂದು 78 ವರ್ಷ ವಯಸ್ಸಾಗಿತ್ತು. ರಾಘವೇಂದ್ರ ಅವರು ತಮ್ಮ ಹಿಂದೆ ಪತ್ನಿ, ಇಬ್ಬರು ಪುತ್ರರು
ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಬೆಳಗಾವಿಯ ಭಾಗ್ಯ ನಗರದ ಏಳನೇ ಕ್ರಾಸ್ ನಲ್ಲಿ ಜೋಶಿಯವರ ಮನೆಯಿದ್ದು ಸಂಜೆ 5 ಗಂಟೆಗೆ ಹಿಂದವಾಡಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.