ರಂಗನಾಥ ಕೆ.ಮರಡಿ
ತುಮಕೂರು: ಮಕ್ಕಳಿಗೆ ಪಾಠ ಮಾಡುವುದರ ಜತೆಗೆ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಮುಖ್ಯ ಶಿಕ್ಷಕ ಪರಿಸರ ಪ್ರೇಮ ಮೆರೆಯು ತ್ತಿದ್ದಾರೆ.
ಜಿಲ್ಲೆಯ ಮಧುಗಿರಿ ತಾಲೂಕಿನ ನೇರೆಳೇಕೆರೆಯ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್. ಲಕ್ಷ್ಮಿಪ್ರಸಾದ್ ಅವರು ಹಲವು ವರ್ಷಗಳಿಂದ ಹಾವು ಹಿಡಿಯುವ ಕಾಯಕ ಮಾಡುತ್ತಿದ್ದಾರೆ. ಇಲ್ಲಿಯವರೆಗೂ 1896 ವಿವಿಧ ರೀತಿಯ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಯಾವುದೇ ಸಂಭಾವನೆ ಪಡೆಯದೆ ಉಚಿತವಾಗಿ ಹಗಲಿರುಳು ಎನ್ನದೆ ಹಾವುಗಳನ್ನು ರಕ್ಷಿಸುವ ಕೈಕಂರ್ಯ ಮಾಡುತ್ತಿದ್ದಾರೆ.
ಶಾಲೆಯಲ್ಲಿಯೂ ರೈತನ ಸ್ನೇಹಿತನಾಗಿರುವ ಉರಗ ರಕ್ಷಣೆಯ ಬಗ್ಗೆ ಮಕ್ಕಳಲ್ಲಿಯೂ ಅರಿವು ಮೂಡಿಸುತ್ತಿರುವ ಲಕ್ಷ್ಮಿ ಪ್ರಸಾದ್ ಅವರಿಗೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಅಭಿನಂದಿಸಿವೆ.
*
ಮುಖ್ಯ ಶಿಕ್ಷಕ ಲಕ್ಷ್ಮಿಪ್ರಸಾದ್ ಅವರು ಶಾಲೆಯಲ್ಲಿ ಉತ್ತಮ ಬೋಧನೆ ಮಾಡುವುದರೊಂದಿಗೆ ಉರಗ ರಕ್ಷಿಸುತ್ತಿರುವ ಕಾಯಕ ಮಾಡುತ್ತಿದ್ದಾರೆ. ಉಚಿತವಾಗಿ ಹಾವು ಹಿಡಿದು ಕಾಡಿಗೆ ಬಿಡುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.ಮಕ್ಕಳು, ಜನರಲ್ಲಿಯೂ ಉರಗ ರಕ್ಷಣೆ ಅರಿವು ಮೂಡಿಸುತ್ತಿದ್ದಾರೆ.
ಸುಧೀಂದ್ರ, ನಾಗರಿಕ.
ಭೂಮಿಯ ಮೇಲೆ ಮನುಷ್ಯನ ರೀತಿ ಹಾವುಗಳು ಬದುಲುವ ಹಕ್ಕು ಹೊಂದಿವೆ. ಹಾವುಗಳು ನಶಿಸಿದರೆ ಜಗತ್ತು ನಾಶವಾಗುತ್ತೆ. ಹಾವುಗಳನ್ನು ಕೆಣಕಿದರೆ ಮಾತ್ರ ಮನುಷ್ಯನಿಗೆ ತೊಂದರೆ ಮಾಡುತ್ತವೆ. ಎಲ್ಲಾದರೂ ಹಾವುಗಳು ಕಂಡುಬಂದರೆ ಸಾಯಿಸಬೇಡಿ.
ಲಕ್ಷ್ಮಿಪ್ರಸಾದ್, ಮುಖ್ಯ ಶಿಕ್ಷಕ ಹಾಗೂ ಉರಗ ರಕ್ಷಕ.