ಬೆಳಗಾವಿ: ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಅವರ ತಂಡದಿಂದ ಮೈತ್ರಿಿ ಸರಕಾರ ಪತನವಾಯ್ತು ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಅಥಣಿಯಿಂದಲೇ ಸರಕಾರದ ಪತನಕ್ಕೆೆ ಮುಹೂರ್ತ ಸಿದ್ಧವಾಯಿತು. ಇದಕ್ಕೆೆ ಪ್ರಮುಖ ಕಾರಣ ಡಿ.ಕೆ.ಶಿವಕುಮಾರ್ ಮತ್ತು ತಂಡ.
ಅಥಣಿ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಹಣ ಕೊಡದ ಹಿನ್ನೆೆಲೆಯಲ್ಲಿ ಸರಕಾರ ಪತನಕ್ಕೆೆ ಮುಂದಾಗಬೇಕಾಯಿತು ಎಂದರು. ಚುನಾವಣೆ ವೇಳೆ ಅಥಣಿ ಕ್ಷೇತ್ರದ ಮತದಾರರಿಗೆ ಭರವಸೆಗಳನ್ನು ನೀಡಿದ್ದೆವು. ಕೆರೆಗಳಿಗೆ ನೀರು ತುಂಬಿಸುವುದು, ನೀರಾವರಿ ಯೋಜನೆಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದ್ದೆ. ಮತ್ತೆೆ ಸಿದ್ದರಾಮಯ್ಯ ಅವರು ಸಿಎಂ ಹಾಗೂ ಎಂ.ಬಿ.ಪಾಟೀಲ್ ಅವರು ಜಲ ಸಂಪನ್ಮೂಲ ಸಚಿವರಾಗುತ್ತಾಾರೆ ಎಂದು ಭರವಸೆ ನೀಡಿದ್ದೆ. ಆದರೆ ಫಲಿತಾಂಶದ ನಂತರ ಎಲ್ಲ ಬದಲಾಯಿತು. ಮೈತ್ರಿಿ ಸರಕಾರದಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅಥಣಿ ಕ್ಷೇತ್ರಕ್ಕೆೆ ನಯಾ ಪೈಸೆ ಕೊಡಲಿಲ್ಲ. ಹೀಗಾಗಿ ಸರಕಾರ ಪತನಗೊಳಿಸಬೇಕಾಯಿತು ಎಂದರು.
ಸುಪ್ರೀಂಕೋರ್ಟ್ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕಲ್ಪಿಿಸಿದರೆ ನಾನೇ ನಿಲ್ಲುತ್ತೇನೆ. ನನ್ನ ಮುಂದೆ ಸಹೋದರ ಲಖನ್ ಜಾರಕಿಹೊಳಿ ಏನೂ ಅಲ್ಲ. ಕಾಂಗ್ರೆೆಸ್ ಲಖನ್ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಇನ್ನಷ್ಟು ಹೆಚ್ಚು ಮತ ಗಳಿಸಬಹುದು. ಲಖನ್ ಬಾಲ್ ಮತ್ತು ಪ್ಯಾಾಡ್ ಮಾತನ್ನು ಬಿಟ್ಟು ಒಳ್ಳೆೆ ವಿಚಾರ ಮಾತನಾಡುವುದನ್ನು ಕಲಿಯಬೇಕು.
ರಮೇಶ್ ಜಾರಕಿಹೊಳಿ
ಅನರ್ಹ ಶಾಸಕ