Sunday, 12th May 2024

ಸೈನೈಡ್ ಹಂತಕನ ಸೆರೆ: ಹಣ ಹಾಗೂ ಚಿನ್ನ ವಶ

ಅಮರಾವತಿ: ಸಂಪತ್ತಿಿನ ಆಸೆಗೆ 14 ವರ್ಷಗಳ ಅವಧಿಯಲ್ಲಿ ಪತಿ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಸೈನೈಡ್ ಮಿಶ್ರಿಿತ ಆಹಾರ ನೀಡಿ ಹತ್ಯೆೆ ಮಾಡಿದ್ದಕ್ಕೆೆ ಕೇರಳದ ‘ಸೈನೈಡ್ ಜಾಲಿ’ ಸಿಕ್ಕಿಿಬಿದ್ದ ಬೆನ್ನಲ್ಲೇ ಆಂಧ್ರಪ್ರದೇಶದಲ್ಲಿ ಅದಕ್ಕಿಿಂತಲೂ ಕ್ರೂರ ಸೈನೈಡ್ ಸರಣಿ ಹಂತಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾಾನೆ. ಸೈನೈಡ್ ಪ್ರಸಾದ ಅಥವಾ ಔಷಧ ನೀಡಿ ಕಳೆದ 20 ತಿಂಗಳು ಅವಧಿಯಲ್ಲಿ 10 ಮಂದಿಯನ್ನು ಕೊಂದು ಅವರಿಂದ ಹಣ- ದೋಚಿದ್ದ ವ್ಯಕ್ತಿಿಯನ್ನು ಪೊಲೀಸರು ಬಂಧಿಸಿದ್ದಾಾರೆ.

ಪಶ್ಚಿಿಮ ಗೋದಾವರಿ ಜಿಲ್ಲೆೆಯ ವೆಂಕಟಾಪುರಂ ಗ್ರಾಾಮದ ವೆಲ್ಲಾಾ ಂಕಿ ಸಿಂಹಾದ್ರಿಿ ಅಲಿಯಾಸ್ ಶಿವ(38) ಎಂಬಾತನೇ ಖೆಡ್ಡಾಾಕ್ಕೆೆ ಬಿದ್ದವ. ಈತ ಸೈನೈಡ್ ಹತ್ಯೆೆಗಳಿಂದ 24.60 ಲಕ್ಷ ರೂ. ನಗದು ಹಾಗೂ 35.25 ತೊಲ ಬಂಗಾರವನ್ನು ಗಳಿಸಿದ್ದ. ಈ ರೀತಿ ಸಂಪಾದಿಸಿದ ಹಣದಲ್ಲಿ ನಿವೇಶನ ಖರೀದಿಸಿ ಮನೆಯನ್ನೂ ಕಟ್ಟಿಿಸಿದ್ದ. 2 ತಿಂಗಳ ಹಿಂದಷ್ಟೇ ಹೊಸ ಮನೆಗೆ ಪ್ರವೇಶಿಸಿದ್ದ.‘ ಸೈನೈಡ್ ಶಿವ’ ನಿಂದ ಪೊಲೀಸರು ಇದೀಗ 1.63 ರೂ. ನಗದು ಹಾಗೂ ಒಂದಿಷ್ಟು ಚಿನ್ನವನ್ನು ವಶಪಡಿಸಿಕೊಂಡಿದ್ದಾಾರೆ. ಈತನಿಗೆ ಸೈನೈಡ್ ಪೂರೈಸುತ್ತಿಿದ್ದ ಅಮೀನುಲ್ಲಾಾ ಬಾಬು (60) ಎಂಬಾತನನ್ನೂ ಬಂಧಿಸಿದ್ದಾಾರೆ

ಆಪರೇಷನ್ ಹೇಗೆ?: ವೃತ್ತಿಿಯಲ್ಲಿ ವಾಚ್‌ಮನ್ ಆಗಿದ್ದ ಸೈನೈಡ್ ಶಿವ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ. ಅದರಲ್ಲಿ ನಷ್ಟ ಅನುಭವಿಸಿದ ಬಳಿಕ ಹಣ ಗಳಿಕೆಗಾಗಿ ಹತ್ಯೆೆ ಮಾಡಲು ಆರಂಭಿಸಿದ್ದ. ಈ ಕೊಲೆಗಳಿಗೆ ಆತ ಸೈನೈಡ್‌ಗಳನ್ನು ಬಳಸುತ್ತಿಿದ್ದ ಎಂದು ಪೊಲೀಸರು ವಿವರಿಸಿದ್ದಾಾರೆ.

ಹಣ ಡಬಲ್ ಮಾಡಿಕೊಡುವುದಾಗಿ ಅಥವಾ ಮಧುಮೇಹದಂತಹ ದೀರ್ಘಕಾಲದ ಔಷಧ ನೀಡುವುದಾಗಿ ಜನರನ್ನು ನಂಬಿಸುತ್ತಿಿದ್ದ. ಬಳಿಕ ಅವರನ್ನು ಏಕಾಂಗಿಯಾಗಿ ನಿರ್ಜನ ಪ್ರದೇಶಕ್ಕೆೆ ಕರೆದೊಯ್ಯುತ್ತಿಿದ್ದ. ಹಣ ಡಬಲ್ ಆಗಬೇಕು ಎಂದು ಬಯಸುವವರಿಗೆ ಹಣ ತರುವಂತೆ ಹಾಗೂ ಅಭರಣ ಧರಿಸಿಕೊಂಡು ಬರುವಂತೆ ಮೊದಲೇ ಹೇಳುತ್ತಿಿದ್ದ. ಬಂದ ಕೂಡಲೇ ಪ್ರಸಾದವನ್ನು ನೀಡಿ ಅದನ್ನು ಸೇವಿಸಲು ಹೇಳುತ್ತಿಿದ್ದ. ಮೊದಲೇ ಸೈನೈಡ್ ಬೆರೆಸಿದ್ದ ಪ್ರಸಾದ ಅದಾಗಿರುತ್ತಿಿತ್ತು. ತಿಂದವರು ಕೂಡಲೇ ಮರಣ ಹೊಂದುತ್ತಿಿದ್ದರು.

ಅದೇ ರೀತಿ ಕಾಯಿಲೆಗೆ ಔಷಧಿ ಬೇಕೆನ್ನುವವರಿಗೆ ‘ಗಿಡಮೂಲಿಕೆ ಔಷಧ’ದಲ್ಲಿ ಸೈನೈಡ್ ಬೆರೆಸಿ ತಿನ್ನಿಿಸುತ್ತಿಿದ್ದ. ಸಾವನ್ನಪ್ಪುುತ್ತಿಿದ್ದರು. ಈ ರೀತಿ ಹತ್ಯೆೆಗೀಡಾದವರಿಂದ ಹಣ ಆಭರಣ ದೋಚಿ ಪರಾರಿಯಾಗುತ್ತಿಿದ್ದ. ನಿರ್ಜನ ಪ್ರದೇಶದಲ್ಲಿ ಶವ ಪತ್ತೆೆಯಾಗುತ್ತಿಿದ್ದರಿಂದ ಕುಟುಂಬದವರು ಇದು ಸಾಮಾನ್ಯ ಸಾವು ಇರಬೇಕು ಎಂದು ಪರಿಗಣಿಸಿ ಅಂತ್ಯಕ್ರಿಿಯೆ ನೆರವೇರಿಸುತ್ತಿಿದ್ದರು. ಇದು ಸರಣಿ ಹತ್ಯೆೆ ಎಂದು ಯಾರಿಗೂ ಅನುಮಾನ ಬಾರದಿರಲಿ ಎಂದು 2 ತಿಂಗಳಿಗೊಂದು ಹತ್ಯೆೆ ನಡೆಸುತ್ತಿಿದ್ದ.

ಆರೋಪಿ ಶಿವ ಸಿಕ್ಕಿಿಬಿದ್ದದ್ದು ಹೇಗೆ?
ಹಣ ಡಬಲ್ ಮಾಡಿಕೊಡುವುದಾಗಿ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನು ಅ.6 ರಂದು ಕರೆಸಿಕೊಂಡು ಕೊಂದು ಶಿವ ಪರಾರಿಯಾಗಿದ್ದ. ಆದರೆ ಕಾಟಿ ನಾಗರಾಜು (49) ಎಂಬ ಆ ಶಿಕ್ಷಕನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು. ಮನೆಯಿಂದ ಹೊರಹೋಗುವಾಗ 2 ಲಕ್ಷ ರೂ. ನಗದು ಹಾಗೂ 50 ಗ್ರಾಾಂ ಚಿನ್ನದೊಂದಿಗೆ ನಾಗರಾಜು ತೆರಳಿದ್ದರು ಎಂದು ಕುಟುಂಬ ವರ್ಗ ಹೇಳಿತ್ತು. ಅದರ ಆಧಾರದ ಮೇಲೆ ಪೊಲೀಸರು ಸಿಸಿಟೀವಿ ಹಾಗೂ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದಾಗ ನಾಗರಾಜು ಅವರು ಸೈನೈಡ್ ಶಿವನನ್ನು ಭೇಟಿಯಾಗಿರುವುದು ಪತ್ತೆೆಯಾಯಿತು. ‘ವಿಚಾರಣೆ’ ನಡೆಸಿದಾಗ ಇದು ತನ್ನ ಕೊಲೆ ಎಂಬುದನ್ನು ಸೈನೈಡ್ ಶಿವ ಒಪ್ಪಿಿಕೊಂಡಿದ್ದಾಾನೆ.

Leave a Reply

Your email address will not be published. Required fields are marked *

error: Content is protected !!