ಕುಶಾಲನಗರ: ನಾಪತ್ತೆಯಾಗಿದ್ದ ಎಎಸ್ ಐ ಸುರೇಶ್ ಶವ ಹಾಸನ ಜಿಲ್ಲೆ ಕೊಣನೂರಿನ ಕೆರೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗುವು ದರೊಂದಿಗೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೂಲತಃ ಹಾಸನ ಜಿಲ್ಲೆಯ ಕೊಣನೂರು ಸಿದ್ದಾಪುರ ಗೇಟ್ ನವರಾದ ಅವರು ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕರ್ತವ್ಯದ ನಿಮಿತ್ತ ಮನೆಯಿಂದ ಹೋದವರು ಪೊಲೀಸ್ ಠಾಣೆಗೆ ತೆರಳದೆ ನಾಪತ್ತೆಯಾಗಿದ್ದರು. ಇತ್ತ ಮನೆಗೆ ಬಾರದ ಹಿನ್ನಲೆ ಯಲ್ಲಿ ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತಲ್ಲದೆ, ಎಲ್ಲೂ ಸುಳಿವು ಸಿಗದೆ ಇದ್ದಾಗ ಪತ್ನಿ ಕುಶಾಲನಗರ […]