ಬಿಜೆಪಿ ಶಾಸಕರಿಗೆ ತಲಾ 50 ಕೋಟಿ
ಸಿಎಂ ಬೊಮ್ಮಾಯಿ ನಿರ್ಧಾರ
ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಶಾಸಕರಿಗೆ ಇಲ್ಲೊಂದು ಸಿಹಿ ಸುದ್ದಿ. ಕೋವಿಡ್ ಮೂರನೇ ಅಲೆಯಲ್ಲಿ ಕ್ಷೇತ್ರದ ಅಭಿವೃದ್ಧಿ ಗತಿ ಏನು? ಎಂದು ಯಾವ ಶಾಸಕ ರರೂ ಇನ್ನು ಚಿಂತಿಸುವಂತಿಲ್ಲ. ಏಕೆಂದರೆ, ರಾಜ್ಯ ಸರಕಾರ ಶಾಸಕರಿಗೆ ಭರಪೂರ ಅನುದಾನ ಒದಗಿಸಲು ತೀರ್ಮಾನಿಸಿದೆ. ಅದರಲ್ಲೂ ಬಿಜೆಪಿ ಶಾಸಕರಿಗೆ ವಿಧಾನಸಭೆ ಅಧಿವೇಶನ ವೇಳೆಗೆ ಅನುದಾನದ ಹಬ್ಬವನ್ನೇ ನಿರ್ಮಾಣ ಮಾಡುವ ಸಿದ್ಧತೆಯಲ್ಲಿದೆ.
ಪದೇಪದೇ ಕೇಳಿ ಬರುತ್ತಿದ್ದ ಬಿಜೆಪಿ ಶಾಸಕರ ಅನುದಾನ ಸಮಸ್ಯೆ ನಿವಾರಿಸಲು ಸರಕಾರ ಈ ಬಾರಿ ತಲಾ ೫೦ ಕೋಟಿಗಳ ನೀಡಲು ಲೆಕ್ಕಾಚಾರ ಮಾಡಿದೆ. ಈ ಮೂಲಕ ಬಿಜೆಪಿಯ ಎಲ್ಲ 122 ಶಾಸಕರಿಗೂ ಸುಮಾರು 6000 ಕೋಟಿಗಳಿಗೂ ಹೆಚ್ಚಿನ ಅನುದಾನ ಒದಗಿಸಲು ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲ ವಾರು ಸುತ್ತಿನ ಮಾತುಕತೆ ನಡೆಸಿದ್ದು, ತಾವು ಸೂಚಿಸಿದಾಗ ಅನುದಾನ ಬಿಡುಗಡೆ ಮಾಡಬೇಕೆಂದು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಪ್ರತಿ ಬಾರಿಯೂ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಸಂದರ್ಭದಲ್ಲಿ ಅನುದಾನ ಬೇಡಿಕೆಗಳನ್ನಿಡುತ್ತಿದ್ದರಿಂದ ಅಧಿವೇಶನಕ್ಕೂ ಮುನ್ನವೇ ಅನುದಾನ ಬಿಡಗಡೆ ಮಾಡುವ ಬಗ್ಗೆ ಚರ್ಚಿಸಲಾಗಿತ್ತು.
ಆದರೆ ಮುಂಚೆಯೇ ಅನುದಾನ ಒದಗಿಸಿದರೆ ಶಾಸಕರು ಅಧಿವೇಶನ ಸಂದರ್ಭದಲ್ಲಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡು ತ್ತಾರೆ. ಇದರಿಂದ ಇಡೀ ಅಧಿವೇಶನದಲ್ಲಿ ಶಾಸಕರು ಚರ್ಚೆಗಳಲ್ಲಿ ಭಾಗವಹಿಸಿ ಸರಕಾ ರದ ಪರ ನಿಲ್ಲುವುದಿಲ್ಲ ಎನ್ನುವ ಆತಂಕ ದಲ್ಲಿ ಮುಖ್ಯಮಂತ್ರಿ ಅವರು ಅಽವೇಶನದ ಮುಗಿದ ನಂತರ ಅನುದಾನ ಬಿಡುಗಡೆ ಎಂದು ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಗಳ ಕಚೇರಿ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕರಿಗೆ ಏನು ಸಿಗುತ್ತೇ : ರಾಜ್ಯದ ಆದಾಯದ ಮೂಲಗಳಲ್ಲಿ ಈಗ ಚೇತರಿಕೆ ಕಂಡಿದ್ದು, ಶಾಸಕರಿಗೆ ಈಗಲೂ
ಅನುದಾನ ಒದಗಿಸದೇ ಇದ್ದರೆ ಅಧಿವೇಶನದಲ್ಲಿ ಭಾರೀ ಗದ್ದಲ ಉಂಟಾಗಬಹುದು. ಮುಂದೆ ಜಿಲ್ಲಾ ಪಂಚಾಯಿತಿ, ತಾಲೂಕು
ಪಂಚಾಯಿತಿ ಚುನಾವಣೆಗಳ ಕಾಲ ಕೂಡ ಬರುತ್ತಿದ್ದು, ಈಗ ಶಾಸಕರಿಗೆ ಸಿಕ್ಕಿ ಒಂದಷ್ಟು ಕೆಲಸಗಳು ಆರಂಭವಾಗದಿದ್ದರೆ ಗ್ರಾಮ ಗಳಲ್ಲಿ ಮತದಾರರನ್ನು ಮಾತನಾಡಿಸುವುದೇ ಕಷ್ಟವಾಗಬಹುದು ಎಂದು ಮುಖ್ಯಮಂತ್ರಿ ಅರಿತಿದ್ದಾರೆ.
ಹೀಗಾಗಿ ಅವರು ಬಿಜೆಪಿ ಶಾಸಕರಿಗೆ ತಲಾ 50 ಕೋಟಿಗಳಂತೆ ಸುಮಾರು 1600 ಕೋಟಿಗಳನ್ನು ನೀಡಲಿದ್ದಾರೆ. ಇದರಿಂದ
ಆಗಬಹುದಾದ ಕಾಂಗ್ರೆಸ್ ಶಾಸಕರ ವಿರೋಧಕ್ಕೆ ಉತ್ತರ ನೀಡಲು ಅವರಿಗೂ ತಲಾ 10 ರಿಂದ 15 ಕೋಟಿ ವರೆಗೂ ನೀಡುವ
ಚಿಂತನೆಯಿದೆ. ಈ ತಾರತಮ್ಯ ವಿರೋಧಿಸಿ ಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸುವ ಸಾಧ್ಯತೆಯೂ ಇದೆ. ಒಟ್ಟಾರೆ ಈ ಬಾರಿ ಶಾಸಕರ ಅನುದಾನಕ್ಕಾಗಿಯೇ ಸರಕಾರ ಸುಮಾರು ?೧೦ ಸಾವಿರ ಕೋಟಿ ವರೆಗೂ ವೆಚ್ಚ ಮಾಡಲು ನಿಶ್ಚಯ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅದೃಷ್ಟವಂತರಿಗೆ ಅನುದಾನ!
ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಡಲಾರಂಭಿಸಿದ್ದ ಕೋವಿಡ್ ಮತ್ತು ಲಾಕ್ಡೌನ್ ಪರಿಣಾಮ ರಾಜ್ಯದಲ್ಲಿ ಆದಾಯ ಮೂಲ ನೆಲೆ ಕಚ್ಚಿತ್ತು. ಶಾಸಕರಿಗೆ ಅನುದಾನವೇ ಇಲ್ಲದಂತಾಗಿತ್ತು. ಇದರಿಂದ ಶಾಸಕರಿಗೆ ಸಿಗಬೇಕಾದ ವಾರ್ಷಿಕ
ಅನುದಾನ ಪಡೆಯುವುದೂ ಕಷ್ಟವಾಗಿತ್ತು. ಆದರೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯುವ ಸಂದರ್ಭ ದಲ್ಲಿ ರಾಜ್ಯದ ಆರ್ಥಿಕ ಸಮಸ್ಯೆ ಕೊಂಚ ಸುಧಾರಿಸಿತ್ತು. ಹೀಗಾಗಿ ಯಡಿಯೂರಪ್ಪ ಅವರು ಶಾಸಕರು ತಮ್ಮ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗಾಗಿ ಸುಮಾರು 1600 ಕೋಟಿ ಅನುದಾನವನ್ನು ನೇರವಾಗಿ ಶಾಸಕರಿಗೆ ನೀಡಿದ್ದರು. ಇದು ವಿವಾದಕ್ಕೀಡಾಗಿ ದೆಹಲಿಯ ಹೈಕಮಾಂಡ್ವರೆಗೂ ಹೋಗಿತ್ತು. ಕೆಲವರಿಗೆ ಅನುದಾನ ಸ್ಕಿಕರೆ ಉಳಿದವರಿಗೆ ಮಂಜೂರು ಪ್ರತಿ ಅಷ್ಟೇ.
***
ನನಗೆ ಈ ಬಿಜೆಪಿ ಸರಕಾರದ ಅವಧಿಯಲ್ಲಿ ಮಂಜೂರು ಮಾಡಿದ್ದ ೫ ಕೋಟಿ ಅನುದಾನ ಕೂಡ ಬಿಡಗಡೆಯಾಗಿಲ್ಲ. ಆದರೆ ಬಿಜೆಪಿ ಕ್ಷೇತ್ರಗಳಿಗೆ ಕೇಳಿದಷ್ಟು ಬಿಡುಗಡೆ ಮಾಡಲಾಗಿದೆ. ಮುಂದೆಯೂ ಇದೇ ರೀತಿ ತಾರತಮ್ಯವಾದರೆ ಹೋರಾಟ ನಡೆಸುತ್ತೇನೆ. ಈ ಬಗ್ಗೆ ವಿಧಾನ ಸಭೆಯಲ್ಲಿ ಪ್ರಶ್ನಿಸುತ್ತೇನೆ.
– ಪುಟ್ಟರಂಗಶೆಟ್ಟಿ ಚಾಮರಾಜನಗರ ಕ್ಷೇತ್ರದ ಶಾಸಕ
ಈ ಹಿಂದೆ ಯಡಿಯೂರಪ್ಪ ಅವರು ಮಂಜೂರು ಮಾಡಿದ್ದ ಅನುದಾನ ಈತನಕ ಬಿಡುಗಡೆಯಾಗಿಲ್ಲ. ಬಿಬಿಎಂಪಿ ಮೂಲಕ ನೀಡುತ್ತಿದ್ದ ಅನುದಾನದಲ್ಲೂ ಏನೂ ಬಂದಿಲ್ಲ. ಈಗ ಮುಖ್ಯಮಂತ್ರಿ ಅವರು ಹೆಚ್ಚಿನ ಅನುದಾನದ ಭರವಸೆ ನೀಡಿದ್ದಾರೆ. ನೋಡೋಣ.
– ರವಿಸುಬ್ರಮಣ್ಯ ಬಸವನಗುಡಿ ಕ್ಷೇತ್ರದ ಶಾಸಕ