ಚಿಕ್ಕ ಆರೋಗ್ಯ ಸಮಸ್ಯೆಗೂ ಮಹಿಳೆಯರ ದೌಡು
ಅಪರ್ಣಾ ಎ.ಎಸ್. ಬೆಂಗಳೂರು
ಸಾರಿಗೆ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ ಯೋಜನೆ’ ಜಾರಿಗೊಂಡ ಬಳಿಕ ದೇವಾಲಯ, ಪ್ರವಾಸಿ ಸ್ಥಳಗಳಿಗೆ ಮಾತ್ರವಲ್ಲ, ರಾಜಧಾನಿ ಬೆಂಗಳೂರಿಗೆ ಸಹ ಮಹಿಳಾ ಮಣಿಗಳು ದಾಂಗುಡಿ ಇಡುತ್ತಿದ್ದಾರೆ.
ಅಚ್ಚರಿ ಎಂದರೆ, ಶಕ್ತಿ ಯೋಜನೆಯ ನೆರವು ಪಡೆದು ಬಹುತೇಕ ಮಹಿಳೆಯರು ಬೆಂಗಳೂ ರಿಗೆ ಬರುತ್ತಿರುವುದು ಅನಾರೋಗ್ಯದ ಚಿಕಿತ್ಸೆಯ ಕಾರಣಕ್ಕೆ. ಮೊದಲೆಲ್ಲ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಸ್ಥಳೀಯ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯರು, ಇದೀಗ ಪ್ರಯಾಣ ಉಚಿತವಿರುವುದರಿಂದ ಬೆಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿರುವ ‘ಹೈಟೆಕ್’ ಚಿಕಿತ್ಸೆಯತ್ತ ಒಲವು ತೋರುತ್ತಿದ್ದಾರೆ. ಇದರಿಂದಾಗಿ ರಾಜಧಾನಿಯ ಆಸ್ಪತ್ರೆ ಗಳಲ್ಲಿ ಜನಸಂದಣಿ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ಸ್ಥಳೀಯ ಮಟ್ಟದಲ್ಲಿ ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಗುಣವಾಗದ ಕಾಯಿಲೆ ಗಳ ಪರಿಶೀಲನೆ, ಚಿಕಿತ್ಸೆಗೆ ಮಾತ್ರ ಬೆಂಗಳೂರಿನತ್ತ ಜನರು ನೋಡುತ್ತಿದ್ದರು. ಆದರೀಗ ಸಣ್ಣ- ಪುಟ್ಟ ಚಿಕಿತ್ಸೆಗೂ ಬೆಂಗಳೂರಿನ ಆಸ್ಪತ್ರೆಗಳೇ ಆದ್ಯತೆಯಾಗಿದೆ. ಹೀಗಾಗಿ ಸರಕಾರಿ ಆಸ್ಪತ್ರೆ ಗಳಲ್ಲಿ ರೋಗಿಗಳ ಸಂಖ್ಯೆ, ಅದರಲ್ಲೂ ಮಹಿಳೆಯರ ಸಂಖ್ಯೆ ಏರಿಕೆಯಾಗುತ್ತಿದೆ. ಶಕ್ತಿಗೆ ಮುನ್ನ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳ ಸಂಖ್ಯೆಯಲ್ಲಿ ದಿಡೀರ್ ಹೆಚ್ಚಳವಾಗಿದ್ದು, ಈ ತಿಂಗಳು (ಜುಲೈ) ಶೇ. ೩೦ರಿಂದ ೪೦ರಷ್ಟು ಹೆಚ್ಚಾಗಿದೆ. ಈ ಹೆಚ್ಚುವರಿ ರೋಗಿಗಳಲ್ಲಿ ಬಹುತೇಕರು ಮಹಿಳೆಯರು.
ಅಷ್ಟೇ ಅಲ್ಲ, ಅವರೆಲ್ಲರೂ ಇತರೆ ಜಿಲ್ಲೆಗಳಿಂದ ಬಂದವರು ಮತ್ತು ಹೊಸದಾಗಿ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಿಕೊಳ್ಳು ತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತಿವೆ. ನಗರದ ಪ್ರಮುಖ ಆಸ್ಪತ್ರೆಗಳಾದ ವಾಣಿ ವಿಲಾಸ್, ಕಿದ್ವಾಯಿ, ಕೆ.ಸಿ.ಜನರಲ್ ಆಸ್ಪತ್ರೆ, ಜಯದೇವ ಆಸ್ಪತ್ರೆ ಗಳಲ್ಲಿ ಒಂದು ತಿಂಗಳಿನಿಂದ ಹೊರ ರೋಗಜಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಪ್ರತಿ ಆಸ್ಪತ್ರೆ
ಗಳಲ್ಲಿಯೂ ಕಳೆದ ಒಂದು ತಿಂಗಳಿನಿಂದ ಶೇ. ೩೫ರಿಂದ ೪೦ರಷ್ಟು ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿ ಅಂಶಗಳೇ ಹೇಳುತ್ತವೆ.
ಒಪಿಡಿಗೆ ಹೆಚ್ಚಿದ ಬೇಡಿಕೆ
ಸುತ್ತಮುತ್ತಲ ಜಿಲ್ಲೆಗಳಾದ ರಾಮನಗರ, ಕೋಲಾರ, ತುಮಕೂರು, ಮಂಡ್ಯ, ಚಿತ್ರ ದುರ್ಗ, ದಾವಣಗೆರೆ, ಚಿಕ್ಕಮಗಳೂರು ಸೇರಿ ಹಲವು ಭಾಗದಿಂದ ರೋಗಿಗಳು ಬೆಂಗಳೂರಿಗೆ ಆಗಮಿಸುತ್ತಿದ್ದು, ಇದರಿಂದ ನಿತ್ಯವೂ ಹೊರ ರೋಗಿಗಳ ವಿಭಾಗ (ಒಪಿಡಿ)ದ
ದಟ್ಟಣೆ ಹೆಚ್ಚಿದೆ. ಜತೆಗೆ ಅನಿವಾರ್ಯತೆ ಇರುವ ರೋಗಿಗಳಿಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಪರದಾಡುವಂತಾಗಿದೆ. ಸಣ್ಣ ಸಮಸ್ಯೆಗಳಿಗೆ ಬೆಂಗಳೂರು ಆಸ್ಪತ್ರೆಗೆ ಬರಬೇಡಿ.
ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಿರಿ ಎಂದು ಮನವಿ ಮಾಡಿಕೊಂಡರೂ ಕೇಳದೇ ನೂಕು ನುಗ್ಗಲು ಸೃಷ್ಟಿಸುತ್ತಿರುವುದು ಒಂದು ತಿಂಗಳಿನಿಂದ ಸರ್ವೇ ಸಾಮಾನ್ಯವಾಗಿ ಹೋಗಿದೆ ಎನ್ನುತ್ತಾರೆ ಆಸ್ಪತ್ರೆಯೊಂದರ ಹಿರಿಯ ವೈದ್ಯರು.