Sunday, 19th May 2024

ಮಾನ ಹಾನಿಕರ ಹೇಳಿಕೆ: ಪರಿಹಾರ ನೀಡುವಂತೆ ಮಾಜಿ ರಾಜ್ಯಪಾಲರಿಗೆ ನೋಟಿಸ್

ಶ್ರೀನಗರ: ತನ್ನ ವಿರುದ್ಧ ಮಾನ ಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪಿಡಿಪಿ ಅಧ್ಯಕ್ಷೆ ಮೆಹ ಬೂಬಾ ಮುಫ್ತಿ ಅವರು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರಿಗೆ 10 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸಿ ಶುಕ್ರವಾರ ನೋಟಿಸ್ ರವಾನಿಸಿದ್ದಾರೆ.

ರಾಜ್ಯದ ನಿವಾಸಿಗಳೆಗೆ ಭೂ ಒಡೆತನದ ಹಕ್ಕು ನೀಡುವ ಗುರಿ ಹೊಂದಿದ್ದ, ಈಗ ನಿರ್ಲಕ್ಷಿಸಲಾಗಿರುವ ರೋಶ್ನಿ ಯೋಜನೆಯ ಫಲಾನುಭವಿ ಮೆಹಬೂಬಾ ಮುಫ್ತಿ ಎಂದು ಪ್ರಸ್ತುತ ಮೇಘಾಲಯ ರಾಜ್ಯಪಾಲರಾಗಿರುವ ಸತ್ಯಪಾಲ್ ಮಲ್ಲಿಕ್ ಆರೋಪಿಸಿದ ಬಳಿಕ ಮೆಹಬೂಬಾ ಮುಫ್ತಿ ಈ ನೋಟಿಸು ಜಾರಿ ಮಾಡಿದ್ದಾರೆ.

ನನ್ನ ಕಕ್ಷಿದಾರರು ಪರಿಹಾರಕ್ಕಾಗಿ ನಿಮ್ಮ ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ ಎಂದು ಮೆಹಬೂಬಾ ಮುಫ್ತಿ ಅವರ ವಕೀಲ ಅನಿಲ್ ಸೇಥಿ ಅವರು ನೋಟಿಸ್ನಲ್ಲಿ ಹೇಳಿದ್ದಾರೆ. 30 ದಿನಗಳ ಒಳಗೆ 10 ಕೋಟಿ ರೂಪಾಯಿ ಪರಿಹಾರ ನೀಡಿ. ಇಲ್ಲವೇ, ಕಾನೂನು ಪ್ರಕ್ರಿಯೆ ಎದುರಿಸಲು ಸಿದ್ಧರಾಗಿ ಎಂದು ಮಲ್ಲಿಕ್ ಗೆ ನೀಡಿದ ನೋಟಿಸಿನಲ್ಲಿ ತಿಳಿಸಲಾಗಿದೆ.

ಪರಿಹಾರ ಹಣವನ್ನು ಮುಫ್ತಿ ಮೆಹಬೂಬಾ ಅವರು ವೈಯಕ್ತಿಕವಾಗಿ ಬಳಸುವುದಿಲ್ಲ. ಬದಲಾಗಿ ಅವರು ಅದನ್ನು ಸಾರ್ವಜನಿಕರಿಗಾಗಿ ಬಳಸಲಿದ್ದಾರೆ ಎಂದು ನೋಟಿಸ್ ಹೇಳಿದೆ.

Leave a Reply

Your email address will not be published. Required fields are marked *

error: Content is protected !!