Sunday, 28th April 2024

ಬಿಜೆಪಿ ತೊರೆದಿಲ್ಲ, ಸಮಾಜವಾದಿ ಪಕ್ಷವನ್ನು ಸೇರಿಲ್ಲ: ಸ್ವಾಮಿ ಪ್ರಸಾದ್ ಮೌರ್ಯ

ನವದೆಹಲಿ: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಸ್ವಾಮಿ ಪ್ರಸಾದ್ ಮೌರ್ಯ, ನಾನು ಇನ್ನೂ ಬಿಜೆಪಿಯನ್ನು ತೊರೆದಿಲ್ಲ ಅಥವಾ ಸಮಾಜವಾದಿ ಪಕ್ಷವನ್ನು ಸೇರಿಲ್ಲ. ನನ್ನ ಮುಂದಿನ ಯೋಜನೆಯ ಬಗ್ಗೆ ಶುಕ್ರವಾರ ತಿಳಿಸುವೆ ಎಂದು ತಿಳಿಸಿದ್ದಾರೆ.

“ನಾನು ಸಚಿವ ಸ್ಥಾನ ಮಾತ್ರ ತ್ಯಜಿಸಿದ್ದೇನೆ. ಶೀಘ್ರದಲ್ಲೇ ಬಿಜೆಪಿಯನ್ನು ತೊರೆಯುತ್ತೇನೆ. ಸದ್ಯಕ್ಕೆ ಸಮಾಜವಾದಿ ಪಕ್ಷಕ್ಕೆ ಸೇರುವುದಿಲ್ಲ” ಎಂದು ಸ್ವಾಮಿ ಪ್ರಸಾದ್ ಮೌರ್ಯ ತಿಳಿಸಿದ್ದಾರೆ. ‘ನಾನು ಬಿಜೆಪಿಯನ್ನು ತಿರಸ್ಕರಿಸಿದ್ದೇನೆ… ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

ತಮ್ಮೊಂದಿಗೆ ಸಚಿವರು ಮತ್ತು ಶಾಸಕರು ಪಕ್ಷವನ್ನು ತೊರೆಯಲಿದ್ದಾರೆ ಎಂದರು. ನನ್ನ ಮುಂದಿನ ರಾಜಕೀಯ ನಡೆಯನ್ನು 14 ರಂದು (ಶುಕ್ರವಾರ) ಬಹಿರಂಗಪಡಿಸುತ್ತೇನೆ. ನನ್ನ ನಿರ್ಧಾರವನ್ನು ಹಾಗೂ ನನ್ನೊಂದಿಗೆ ಯಾರು ಬರುತ್ತಾರೆಂದು ನಾನು ನಿಮಗೆ ಹೇಳುತ್ತೇನೆ” ಎಂದು ಮೌರ್ಯ ಹೇಳಿದ್ದಾರೆ.

error: Content is protected !!