Sunday, 19th May 2024

ಭಾರತ್‌ ಬಂದ್‌ಗೆ ಕ್ಯಾರೆನ್ನದ ಉಡುಪಿಯ ಜನತೆ

ಉಡುಪಿ: ಕರ್ನಾಟಕ ಬಂದ್, ಭಾರತ್ ಬಂದ್‌ಗೆ ಕರಾವಳಿಯಲ್ಲಿ ಭಾಗದಲ್ಲಿ ಮಂಗಳವಾರ ಕೂಡ ರೈತ ಸಂಘಟನೆಗಳು ಮತ್ತು ಕೆಲವು ವಿರೋಧ ಪಕ್ಷಗಳು ನೀಡಿದ್ದ ಭಾರತ್ ಬಂದ್ ಕರೆಗೆ ಉಡುಪಿಯ ಜನತೆ‌ ಕ್ಯಾರೇ ಎನ್ನಲಿಲ್ಲ.

ಕೇಂದ್ರ ಸರ್ಕಾರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಉಡುಪಿಯಲ್ಲಿ ನಿರೀಕ್ಷಿತ ಬೆಂಬಲ ದೊರೆಯಲಿಲ್ಲ.

ಭಾರತ್ ಬಂದ್‌ಗೆ ಕರಾವಳಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎಂದಿನಂತೆ ಉಡುಪಿ ನಗರದ ಜನ ತಮ್ಮ‌ ಮಾಮೂಲಿ ಕೆಲಸ ಕಾರ್ಯಗಳಿಗೆ ತೆರಳಿದರು. ಅಂಗಡಿ‌ ಮುಂಗಟ್ಟುಗಳು, ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ. ಸಂಜೆಯ ವೇಳೆಗೆ ಎಡಪಕ್ಷ ಹಾಗೂ ಕಾಂಗ್ರೆಸ್ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆಯಾದರೂ, ಅದು ಕೇವಲ ಸಾಂಕೇತಿಕ ಪ್ರತಿಭಟನೆ ಯಾಗಿರಲಿದೆ.

Leave a Reply

Your email address will not be published. Required fields are marked *

error: Content is protected !!