Wednesday, 1st May 2024

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ’ಕ್ಲೀನ್‌ ಬಸ್ ನಿಲ್ದಾಣ’

ರಾಯಚೂರು: ಸಿಂಧನೂರು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಕರವೇ ಕಾರ್ಯಕರ್ತರು ಸಿಂಧನೂರು ಸಿಂಧನೂರು ಬಸ್ ನಿಲ್ದಾಣವನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಜನಮನ ಗಳಿಸಿದರು.

ದಿನನಿತ್ಯ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಇಲ್ಲದೆ ಪ್ರಯಾಣಿಕರು ಕಸ ಕಡ್ಡಿಗಳ ಮಧ್ಯೆ ಪ್ರಯಾಣಿಸುತ್ತಿರುವದು ಕಾಣಬಹುದಾಗಿತ್ತು. ಇದನ್ನು ಗಮನಿಸಿದ ಕರವೇ ಯುವ ಸೈನ್ಯ ಕಾರ್ಯಕರ್ತರು ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇಡೀ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಸ್ವಚ್ಛತೆಗೆ ಹೆಚ್ಚು ಗಮನಹರಿಸಬೇಕು ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಉಮೇಶ್ ತಾಲೂಕು ಲಕ್ಷ್ಮಣ ಬೋವಿ, ಸಂಚಾಲಕ ಹುಸೇನ್ ಬಾಷಾ, ತಾಲೂಕು ಸಂಚಾಲಕ ರಾಘವೇಂದ್ರ, ಗೌರವಾಧ್ಯಕ್ಷ ದುರ್ಗಪ್ಪ, ನಾಗೇಶ್ ,ರಂಗಪ್ಪ, ಎಂ ಡಿ ಉಸೇನ್, ಸೂರತ್, ಸಮೀರ್, ರಾಜು, ಪ್ರಭುರಾಜ್ ಸ್ವಾಮಿ ಹಿರೇಮಠ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!