Viral video: ಪುಷ್ಪಾ ಸಿನಿಮಾ ರೀತಿಯಲ್ಲೇ ಕಳ್ಳ ಸಾಗಣೆ? ಪ್ರವಾಹದಲ್ಲಿ ತೇಲಿ ಬಂತು ಲಕ್ಷಾಂತರ ಮರದ ದಿಮ್ಮಿ
ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಈ ವರೆಗೆ 75 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದೀಗ ಪ್ರವಾಹದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಈವರೆಗೆ 75 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದೀಗ ಪ್ರವಾಹದ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮರಗಳ ದಿಮ್ಮಿ ನೀರಿನಲ್ಲಿ ತೇಲಿ ಹೋಗುತ್ತಿರುವುದು ಕಂಡು ಬಂದಿದೆ. ನೆಟ್ಟಿಗರು ಈ ದೃಶ್ಯವನ್ನು ಬ್ಲಾಕ್ಬಸ್ಟರ್ 'ಪುಷ್ಪ: ದಿ ರೈಸ್ ಸಿನಿಮಾಗೆ ಹೋಲಿಸುತ್ತಿದ್ದಾರೆ.
ಸೇತುವೆಯ ಮೇಲಿನಿಂದ ತೆಗೆದ ವೈರಲ್ ವೀಡಿಯೊದಲ್ಲಿ, ಕೆಳಕ್ಕೆ ತೇಲುತ್ತಿರುವ ಲಕ್ಷಾಂತರ ಮರದ ದಿಮ್ಮಿಗಳು ಮಂಡಿಯ ಪಾಂಡೋಹ್ ಅಣೆಕಟ್ಟು ಬಳಿ ತೇಲುತ್ತಿರುವುದನ್ನು ತೋರಿಸುತ್ತದೆ. 'ಪುಷ್ಪ: ದಿ ರೈಸ್' ಚಿತ್ರದಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ ನಾಯಕ ಕೆಂಪು ಶ್ರೀಗಂಧದ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ಪೊಲೀಸ್ ಚೆಕ್ಪೋಸ್ಟ್ಗಳಲ್ಲಿ ಸಿಕ್ಕಿಬೀಳುವುದನ್ನು ತಪ್ಪಿಸಲು, ಅವನು ದಿಮ್ಮಿಗಳನ್ನು ಹೊಳೆಯಲ್ಲಿ ಎಸೆದು ಕೆಳಗಿರುವ ಅಣೆಕಟ್ಟಿನಲ್ಲಿ ಅವುಗಳನ್ನು ಹೊರತೆಗೆಯುತ್ತಾನೆ.
ವಿಡಿಯೊ ಇಲ್ಲಿದೆ
Why has there been no inquiry or action from the Himachal Government on this shocking incident of massive tree cutting? The video clearly shows wood piles being swept away in the floods — a direct result of illegal logging by the timber mafia.
— Siddharth Bakaria (@SidHimachal) July 1, 2025
pic.twitter.com/F1pgewloZm
ಹಿಮಾಚಲ ಪ್ರದೇಶದ ಈ ವಿಡಿಯೋ ಜೂನ್ 24 ರದ್ದಾಗಿದ್ದು, ರಾಜ್ಯದ ಕಾಡುಗಳಲ್ಲಿ ಅಕ್ರಮವಾಗಿ ಮರ ಕಡಿಯುತ್ತಿರುವ ಶಂಕೆ ವ್ಯಕ್ತವಾಗಿದೆ. ಆದರೂ, ಹಠಾತ್ ಪ್ರವಾಹದಿಂದಾಗಿ ಮರಗಳು ಬುಡಸಮೇತ ಕಿತ್ತು ಹೋಗಿರಬಹುದು ಎಂದು ಊಹಿಸಲಾಗಿದೆ. ಸೋಮವಾರ ಮುಖ್ಯಮಂತ್ರಿ ಸುಖವಿಂದರ್ ಸುಖು ಅಧ್ಯಕ್ಷತೆಯಲ್ಲಿ ನಡೆದ ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ, ಅವರ ಪ್ರಧಾನ ಸಲಹೆಗಾರ ನರೇಶ್ ಚೌಹಾಣ್ ಮಾತನಾಡಿ, ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ ಮತ್ತು ಏನಾಯಿತು ಎಂಬುದನ್ನು ಕಂಡುಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಕೇಳಿದ್ದೇವೆ. ಅಕ್ರಮ ಮರ ಕಡಿಯುವಿಕೆ ಇರಬಹುದು ಎಂದು ಜನರು ಹೇಳುತ್ತಿದ್ದಾರೆ, ಆದರೆ ತೇಲುವ ದಿಮ್ಮಿಗಳು ಮೋಡಸ್ಫೋಟದ ಪರಿಣಾಮವಾಗಿರಬಹುದು. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೇಘಸ್ಫೋಟದಿಂದ ಹಾನಿಗೊಳಗಾದ ಎಲ್ಲರಿಗೂ ನಾವು ಸಹಾಯ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.
ಜೂನ್ 20 ರಂದು ಮಾನ್ಸೂನ್ ಆರಂಭವಾದಾಗಿನಿಂದ ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 23 ದಿಢೀರ್ ಪ್ರವಾಹ, 19 ಮೇಘಸ್ಫೋಟ ಮತ್ತು 16 ಭೂಕುಸಿತಗಳು ಸಂಭವಿಸಿವೆ. ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.