Sunday, 12th May 2024

ಕಲ್ಯಾಣಂ ತುಳಸಿ ಕಲ್ಯಾಣಂ

* ಹನುಮಂತ ಮ.ದೇಶಕುಲಕರ್ಣಿ

॥ ಪ್ರಸೀದ ತುಲಸೀದೇವಿ ಪ್ರಸೀದ ಹರಿವಲ್ಲಭೇ
ಕ್ಷೀರೋದಮಥನೋದ್ಭೂತೇ ತುಲಸಿ ತ್ವಾಾಂ ನಮಾಮ್ಯಹಮ್ ॥
ಕಾರ್ತಿಕ ಮಾಸದ ಉತ್ಥಾಾನ ದ್ವಾಾದಶಿಯಂದು ಆಚರಿಸುವ ತುಳಸೀ ಪೂಜೆ ನಮ್ಮ ಸಂಸ್ಕೃತಿಯ ವಿಶಿಷ್ಟ ಆಚರಣೆ. ಕೃಷ್ಣನ ಮೂರ್ತಿ ಮತ್ತು ತುಳಸಿಯ ವಿವಾಹವನ್ನು ಮಾಡಿಸುವುದೇ ಈ ಹಬ್ಬದ ವೈಶಿಷ್ಟ್ಯ. ಉತ್ಥಾಾನ ಎಂದರೆ ಏಳುವುದು ಎಂದರ್ಥ. ಅಂದರೆ, ಶ್ರೀಮನ್ನಾಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲಕ್ಕೆೆದ್ದು, ತನ್ನ ನಿದ್ರಾಾಮುದ್ರೆೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವ್ರತವೆಂದು ಹಲವು ಕಡೆ ಆಚರಿಸುವರು. ತುಳಸೀ ಕಲ್ಯಾಾಣ ದೀಪಾವಳಿ ಸಂಭ್ರಮ ಮುಗಿಯುತ್ತಿಿರುವ ಬೆನ್ನಲ್ಲೇ ಕಾರ್ತಿಕ ಮಾಸದ ವೈಭವ. ಈ ಹಬ್ಬದ ಹಿಂದಿನ ದಿವಸ ತುಳಸೀ ವೃಂದಾವನವನ್ನು ಸ್ವಚ್ಛಗೊಳಿಸಿ, ಬಣ್ಣ ಹಚ್ಚಿಿ ಶೃಂಗರಿಸುತ್ತಾಾರೆ. ವೃಂದಾವನದಲ್ಲಿ ಕಬ್ಬು, ಚೆಂಡು ಹೂವು, ಹುಣಸೆ ಹಣ್ಣು, ನೆಲ್ಲಿಕಾಯಿ ಇವುಗಳನ್ನು ಇಡುತ್ತಾಾರೆ. ಈ ವಿವಾಹ ಸಮಾರಂಭವನ್ನು ಸಂಜೆಯ ಸಮಯದಲ್ಲಿ ನೆರವೇರಿಸುತ್ತಾಾರೆ.

ಕಾರ್ತಿಕ ಮಾಸದಲ್ಲಿ ಪ್ರತಿದಿನ ತುಳಸಿಯನ್ನು ಪೂಜಿಸಿ ನಮಸ್ಕರಿಸಿದರೆ ಒಂದು ಯುಗದಲ್ಲಿ ಮಾಡಿದ ಪಾಪದಿಂದ ಮುಕ್ತಿಿ ದೊರೆಯುತ್ತದೆಂಬ ನಂಬಿಕೆ. ಉತ್ಥಾಾನ ದ್ವಾಾದಶಿಯಂದು ತುಳಸೀ ವೃಂದಾವನಕ್ಕೆೆ ಧೂಪ-ದೀಪ-ನೈವೇದ್ಯಗಳಿಂದ ಪೂಜಿಸುತ್ತಾಾರೆ. ವಿಶೇಷವಾಗಿ ಶಂಖದಿಂದ ಹಾಲಿನ ಅಭಿಷೇಕ ಮಾಡಬೇಕು. ಅಂದು ತುಳಸಿಯನ್ನು ಅಗಸೆ ಹಾಗೂ ನೆಲ್ಲಿ ಟೊಂಗೆಯೊಂದಿಗೆ ಕಟ್ಟಿಿ ವೈಭವದಿಂದ ಪೂಜಿಸಿ, ಆರತಿ ಮಾಡಿ, ದಾನಾದಿಗಳನ್ನು ಮಾಡಬೇಕು. ಅಗಸೆ, ನೆಲ್ಲಿ ಮತ್ತು ತುಳಸಿ ಇವು ಮೂರು ಬಹಳ ಪವಿತ್ರವಾದುವು. ವೃಂದಾದೇವಿಯ ಅನುಗ್ರಹಕ್ಕೆೆ ಪಾತ್ರರಾಗಲು ತ್ರಿಿಮೂರ್ತಿಗಳೂ ಅವರ ಪತ್ನಿಿಯರಾದ ಶಕ್ತಿಿದೇವಿಯರೂ ಮತ್ತು ಇತರೆ ದೇವತೆಗಳೂ ಉತ್ಥಾಾನ ದ್ವಾಾದಶಿಯಂದು ಒಟ್ಟಾಾಗಿ ಸೇರುತ್ತಾಾರೆಂದೂ, ಇಷ್ಟಾಾರ್ಥಗಳನ್ನು ಪೂರೈಸುತ್ತಾಾರೆಂದು, ಭಕ್ತಿಿಯಿಂದ ತುಳಸಿಗೆ ನಮಿಸಿ ಕೃತಾರ್ಥರಾಗುತ್ತಾಾರೆ.

ತುಳಸಿಯ ಪೌರಾಣಿಕ ಹಿನ್ನೆೆಲೆ
ಹಿಂದೆ ಸಮುದ್ರ ಮಥನ ಮಾಡುವಾಗ ಬಂದಂತಹ ಅಮೃತ ಕಳಶವನ್ನು ಮಹಾವಿಷ್ಣು ಪಡದುಕೊಳ್ಳುತ್ತಾಾನೆ. ಆ ಸಂದರ್ಭದಲ್ಲಿ ಆತನ ಕಣ್ಣಿಿನಿಂದ ಆನಂದಭಾಷ್ಪ ಉಕ್ಕಿಿ ಬರುತ್ತದೆ. ಇದರ ಒಂದು ಹನಿ ಕಳಶದಲ್ಲಿ ಬಿದ್ದಾಾಗ ಅದು ತುಳಸಿಗಿಡವಾಯಿತು. ಅಮೃತದಿಂದ ಜನಿಸಿದಂತಹ ತುಳಸಿಯನ್ನು ಯಾವ ವಿಧವಾಗಿ ಉಪಯೋಗಿಸಿದರೂ ಅದು ಅಮೃತಮಯವಾಗುತ್ತದೆ. ಇಷ್ಟು ಪವಿತ್ರವಾದ ತುಳಸಿ ಶ್ರೀಮನ್ನಾಾರಾಯಣನಿಗೆ ಲಕ್ಷ್ಮಿಿಯಷ್ಟೇ ಪ್ರಿಿಯಳು. ಆದುದರಿಂದಲೇ ಮೂರೂ ಲೋಕಗಳಲ್ಲಿ ತುಳಸಿಗೆ ಸಮಾನವಾದುದು ಯಾವುದೂ ಇಲ್ಲ ಎಂದು ತಿಳಿಯಲಾಗಿದೆ.

ಇನ್ನೊೊಂದು ಹಿನ್ನೆೆಲೆ ಹೀಗಿದೆ. ಜಲಂಧರನೆಂಬ ಅಸುರನಿದ್ದ. ಆತನ ಪತ್ನಿಿ ವೃಂದಾ, ಪತಿವ್ರತೆ. ಅದಕ್ಕಾಾಗಿಯೇ ಜಲಂಧರನಿಗೆ ಸೋಲು ಎಂಬುದೇ ಇರಲಿಲ್ಲ. ಇದರಿಂದ ಅಹಂಕಾರದ ಮುದ್ದೆೆಯಾದ ಜಲಂಧರ ದೇವತೆಗಳ ಮೇಲೆ ಯುದ್ಧ ಮಾಡಿ ಸೋಲಿಸುತ್ತಾಾನೆ. ಈತನ ಉಪಟಳ ತಾಳಲಾಗದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾಾರೆ. ಇದರಿಂದ ಜಲಂಧರನ ವೇಷಧರಿಸಿದ ವಿಷ್ಣು ವೃಂದಾಳ ಪಾತಿವ್ರತ್ಯವನ್ನು ಭಂಗ ಮಾಡುತ್ತಾಾನೆ. ಜಲಂಧರ ಯುದ್ಧದಲ್ಲಿ ಸಾಯುತ್ತಾಾನೆ. ಇದರಿಂದ ಕೋಪಗೊಂಡ ವೃಂದಾ, ವಿಷ್ಣುವಿಗೆ ಶಾಪನೀಡಿ ತನ್ನ ಪತಿಯ ಶವದೊಂದಿಗೆ ಅಗ್ನಿಿಗೆ ಹಾರುತ್ತಾಾಳೆ. ಆನಂತರ ವೃಂದಾ ತುಳಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಜನಿಸುತ್ತಾಾಳೆ. ಇವಳೇ ರುಕ್ಮಿಿಣಿಯಾಗಿ ಕಾರ್ತಿಕ ಶುದ್ಧ ದ್ವಾಾದಶಿಯಂದು ಕೃಷ್ಣನನ್ನು ವಿವಾಹವಾಗುತ್ತಾಾಳೆ ಎಂಬ ಪ್ರತೀತಿ.

ಎಲ್ಲಾ ಪೂಜೆಗಳಿಗೆ ಅಗತ್ಯ
ತುಳಸಿ ಇಲ್ಲದೇ ಮಾಡಿದ ಪೂಜೆ ನಿಷ್ಫಲವಾಗುವುದು. ತುಳಸಿದಳಗಳು ದೊರೆಯದಿದ್ದರೆ, ತುಳಸೀ ಕಾಷ್ಠದಿಂದ ಪೂಜೆ ಮಾಡಬಹುದು ಅಥವಾ ಹಿಂದಿನ ದಿನ ಉಪಯೋಗಿಸಿದ ತುಳಸೀ ದಳಗಳನ್ನೇ ತೊಳೆದು ಪುನಃ ದೇವರಿಗೆ ಸಮರ್ಪಿಸಬಹುದು. ತುಳಸೀಕಾಷ್ಠಗಳೂ ದೊರೆಯದಿದ್ದರೆ, ಪೂಜಾಸಮಯದಲ್ಲಿ ತುಳಸೀನಾಮದ ಸಂಕೀರ್ತನೆ ಮಾಡಬೇಕು. ಪೂಜೆ ಹೀಗೆಪುರಾಣ ಕಥೆ ಏನೇ ಇದ್ದರೂ, ಅದಕ್ಕೆೆ ಇಂಬುಕೊಡಲು ಎಂಬಂತೆ ತುಳಸಿ ಜೊತೆ ಅಂದು ಕೃಷ್ಣನ ವಿವಾಹ ನೆರವೇರಿಸಲಾಗುತ್ತದೆ.

ತುಳಸಿಯೆಂದರೆ ಪಾವಿತ್ರ್ಯ ಮತ್ತು ಸಾತ್ವಿಿಕತೆಯ ಪ್ರತೀಕ. ತುಳಸಿ ಮತ್ತು ಕೃಷ್ಣನ ವಿವಾಹವಾಗುವುದು ಎಂದರೆ ಈಶ್ವರನಿಗೆ ಜೀವದಲ್ಲಿರುವ ‘ಪಾವಿತ್ರ್ಯ ಎಂಬ ಗುಣವು ಅತಿಯಾಗಿ ಪ್ರಿಿಯವಾಗಿರುವುದು. ಇದರ ಪ್ರತೀಕವೆಂದು ಕೃಷ್ಣನು ‘ವೈಜಯಂತಿ ಮಾಲೆಯನ್ನು’ ಧರಿಸಿರುತ್ತಾಾನೆ.ಈ ದಿನದಿಂದ ಶುಭ ದಿನಗಳು ಅಂದರೆ ಮುಹೂರ್ತಗಳು ಉಳ್ಳ ದಿನಗಳ ಪ್ರಾಾರಂಭವಾಗುತ್ತದೆ. ‘ಈ ವಿವಾಹವು ಭಾರತೀಯ ಸಂಸ್ಕೃತಿಯ ಆದರ್ಶತ್ವವನ್ನು ದರ್ಶಿಸುವ ವಿವಾಹವಾಗಿದೆ’ ಎಂದು ನಂಬಿಕೆಯಿದೆ.

ಮನೆಯ ಅಂಗಳವನ್ನು ಸೆಗಣಿ ನೀರಿನಿಂದ ಸ್ವಚ್ಚಗೊಳಿಸಬೇಕು. ತುಳಸಿ ಗಿಡವನ್ನು ನೆಟ್ಟಿಿದ ಮಡಿಕೆ ಅಥವಾ ವೃಂದಾವನಕ್ಕೆೆ ಬಿಳಿ ಬಣ್ಣವನ್ನು ಹಚ್ಚಬೇಕು. ತುಳಸಿಯ ಸುತ್ತ ಸಾತ್ವಿಿಕ ರಂಗೋಲಿಯನ್ನು ಬಿಡಿಸಬೇಕು. ನಂತರ ಭಾವಪೂರ್ಣವಾಗಿ ತುಳಸಿಯ ಪೂಜೆಯನ್ನು ಮಾಡಬೇಕು. ಪೂಜೆಯನ್ನು ಮಾಡುವಾಗ ಪಶ್ಚಿಿಮ ದಿಕ್ಕಿಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು.

ತುಳಸಿಯ ವೈಶಿಷ್ಟ್ಯಗಳು : ತುಳಸಿಯು ಸಾತ್ವಿಿಕವಾಗಿರುವುದರಿಂದ ತುಳಸೀ ಗಿಡದತ್ತ ಈಶ್ವರನ ಶಕ್ತಿಿಯು ಹೆಚ್ಚು ಪ್ರಮಾಣದಳಲ್ಲಿ ಆಕರ್ಷಿತವಾಗುತ್ತದೆ. ತುಳಸಿಯ ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ಆ ನೀರು ಶುದ್ಧ ಮತ್ತು ಸಾತ್ವಿಿಕ ಮಾತ್ರವಲ್ಲದೆ ಅದರಲ್ಲಿ ಶಕ್ತಿಿಯೂ ಸಮ್ಮಿಿಲಿತವಾಗುತ್ತದೆ.

ಸಂಜೀವಿನಿ ಸ್ವರೂಪ
ವಿವಿಧ ಕಾಯಿಲೆ ವಾಸಿಮಾಡಿ ಜೀವ ನೀಡಬಲ್ಲ ಸಂಜೀವಿನಿಯೂ ಹೌದು. ಇದಕ್ಕಾಾಗಿಯೇ ಆಯುರ್ವೇದದಲ್ಲಿ ತುಳಸಿಗೆ ಪ್ರಥಮ ಸ್ಥಾಾನ. ಎಲೆ, ಬೇರು, ಬೀಜ ಸೇರಿದಂತೆ ಸಂಪೂರ್ಣ ಗಿಡವೇ ಔಷಧಯುಕ್ತ. ತುಳಸಿಯ ವಿಶಿಷ್ಟ ಸುವಾಸನೆಯು ಕ್ರಿಿಮಿ ಕೀಟ, ರೋಗಾಣುಗಳನ್ನು ದೂರವಿಡುತ್ತದೆ. ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮ ರೋಗಾಣುಗಳು ನಾಶವಾಗುತ್ತದೆ. ಸೂರ್ಯೋದಯಕ್ಕೆೆ ಮುನ್ನ, ಅಂದರೆ ಬ್ರಾಾಹ್ಮಿಿ ಮುಹೂರ್ತದಲ್ಲಿ ಇದರ ಸೇವನೆಯಿಂದ ಸಾಕಷ್ಟು ರೋಗ ನಿವಾರಣೆಯಾಗುತ್ತದೆ. ಇದರ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು. ಅಜೀರ್ಣ, ಮಲಬದ್ಧತೆ, ಗ್ಯಾಾಸ್, ಹುಳಿ ಇತ್ಯಾಾದಿಗಳಿಗೆ ಇದು ರಾಮಬಾಣ. ತುಳಸಿ ಗಿಡದ ಹತ್ತಿಿರ ಓದುವುದು, ಸಚ್ಚಿಿಂತನೆ ಮಾಡುವುದರಿಂದ, ದೀಪವನ್ನು ಹಚ್ಚುವುದರಿಂದ ಹಾಗೂ ತುಳಸಿ ಗಿಡದ ಸುತ್ತ ಪ್ರದಕ್ಷಿಣೆ ಹಾಕುವುದರಿಂದ ಐದು ಇಂದ್ರಿಿಯಗಳ ವಿಕಾರಗಳು ದೂರವಾಗುತ್ತವೆ. ಇನ್ನೂ ಹಲವು ಅದ್ಭುತ ಔಷಧೀಯ ಗುಣ ಇದರಲ್ಲಿವೆ.

ತುಳಸಿಯ ವಿವಾಹ
ನಮ್ಮ ಪೂವರ್ಜರು ಪ್ರಾಾಣಿಪಕ್ಷಿಿಗಳಿಗೆ ದೈವತ್ವದ ಸ್ಥಾಾನ ನೀಡಿ ಆರಾಧಿಸಿದ್ದಾಾರೆ. ಬೇವಿನ ಮರ, ಅರಳಿ ಮರ ಹಾಗೂ ತುಳಸಿ ಗಿಡಗಳನ್ನು ಇಂದಿಗೂ ಪೂಜಿಸುವ ಪರಿಪಾಠವಿದೆ. ಅಷ್ಟೇ ಅಲ್ಲದೇ ಇವುಗಳಲ್ಲಿನ ಔಷಧೀಯ ಅಂಶಗಳು ವೈಜ್ಞಾಾನಿಕವಾಗಿ ಸಾಬೀತಾಗಿದೆ.
ಕಾರ್ತಿಕ ಮಾಸದ ದ್ವಾಾದಶಿ ಎಂದರೆ ದೀಪಾವಳಿಯಾಗಿ ಹನ್ನೆೆರಡನೇ ದಿನದಂದು ತುಳಸಿ ಹಬ್ಬ ಅಥವಾ ಉತ್ಥಾಾನ ದ್ವಾಾದಶಿ ಆಚರಿಸಲಾಗುತ್ತದೆ. ಇದನ್ನು ತುಳಸಿ ಮದುವೆ ಎಂದೂ ಕರೆಯುವ ಪ್ರತೀತಿ ಉಂಟು. ಈ ದಿನ ತುಳಸಿ ಕಟ್ಟೆೆಯನ್ನು ಚೆನ್ನಾಾಗಿ ಶುದ್ಧಗೊಳಿಸಿ ಅದಕ್ಕೆೆ ಸುಣ್ಣ ಹಚ್ಚಿಿ ಚಂದ್ರಚೂರ್ಣವನ್ನು ಹಾಲಿನಲ್ಲಿ ಬೆರೆಸಿ ತುಳಸಿ ಕಟ್ಟೆೆಯ ಮೇಲೆ ರಂಗೋಲಿ ಹಾಕುತ್ತಾಾರೆ. ತುಳಸಿ ಕಟ್ಟೆೆಗೆ ಬೆಟ್ಟದ ನೆಲ್ಲಿಕಾಯಿಗಳು ಇರುವ ನೆಲ್ಲಿ ಕಡ್ಡಿಿಯನ್ನು ನೆಟ್ಟು ಪೂಜಿಸಲಾಗುತ್ತದೆ. ಇದೇ ದಿನದಂದು ಕೆಲವರು ಕೃಷ್ಣನ ವಿಗ್ರಹವನ್ನು ತುಳಸಿಯೊಂದಿಗೆ ಪೂಜಿಸಲಾಗುತ್ತದೆ. ಕೆಲವರು ತುಳಸಿ ಗಿಡಕ್ಕೆೆ ಸೀರೆ ಉಡಿಸಿ ಮದುಮಗಳ ರೀತಿಯಲ್ಲಿ ಅಲಂಕರಿಸಿ ಪೂಜಿಸುತ್ತಾಾರೆ. ಇನ್ನೂ ಕೆಲವರು ತುಳಸಿ ಕಟ್ಟೆೆಗೆ ಪೂಜೆ ಮಾಡುತ್ತಾಾರೆ.

ಈ ದಿನ ಸಂಜೆ ಸಾಲು ಸಾಲು ದೀಪಗಳನ್ನು ಹಚ್ಚಿಿ ಅರಿಶಿನ, ಕುಂಕುಮ, ಹೂವು, ಅಕ್ಷತೆ, ಧೂಪಗಳಿಂದ ತುಳಸಿಯನ್ನು ಪೂಜಿಸಲಾಗುವುದು. ಒಂದು ತಟ್ಟೆೆಗೆ ಸ್ವಲ್ಪ ಅಕ್ಕಿಿಯನ್ನು ಹರಡಿ, ಅದರ ಮೇಲೆ ಐದು ನೆಲ್ಲಿಕಾಯಿಗಳನ್ನು ಇಟ್ಟು ಅದನ್ನು ಬಟ್ಟಲಿನ ಆಕಾರಕ್ಕೆೆ ಕತ್ತರಿಸಿ ಅದಕ್ಕೆೆ ತುಪ್ಪದ ಬತ್ತಿಿ ಹಾಕಲಾಗುತ್ತದೆ. ಇದೇ ರೀತಿ ಐದು ನೆಲ್ಲಿಕಾಯಿಗಳನ್ನು ಅಕ್ಕಿಿ ಹಾಕಿದ ತಟ್ಟೆೆಯಲ್ಲಿಟ್ಟು ತುಳಸಿಗೆ ಆರತಿ ಮಾಡಲಾಗುತ್ತದೆ. ಸಿಹಿ ತಿಂಡಿಯನ್ನು ಮಾಡಿ ನೈವೇದ್ಯ ಮಾಡಲಾಗುತ್ತದೆ. ಮುತ್ತೈದೆಯರನ್ನು ಕರೆದು ತಿಂಡಿಗಳನ್ನು ಮತ್ತು ನೆಲ್ಲಿಕಾಯಿಗಳನ್ನು ಬಾಗಿನದ ರೂಪದಲ್ಲಿ ನೀಡಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!