ಮಾನವಿ : ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ ಕಿರುಗುಂದ ಗ್ರಾಮದ ದಲಿತ ಯುವಕ ಮುನೀತ್ ನಿಗೆ ಮೂತ್ರ ಕುಡಿಸಿದ ಗೋಣಿಬೀಡು ಪಿ.ಎಸ್.ಐ. ಅರ್ಜುನ್ ರನ್ನು ಈ ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ತಾಲೂಕ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಾನವಿ (ಎನ್.ಮೂರ್ತಿ ಬಣ) ದಿಂದ ತಾಲೂಕ ದಂಡಧಿಕಾರಿಗಳ ಮೂಲಕ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಿದರು.
ಸುಮಾರು ಒಂದು ವಾರದ ಹಿಂದೆ ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕ ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ನಿಗೆ ಗೋಣಿಬೀಡು ಪಿ.ಎಸ್.ಐ. ಅರ್ಜುನ್ ರವರು ಮೂತ್ರ ಕುಡಿಸಿ, ನಾಚಿಕೆಗೇಡಿ ತನದ ಕೆಲಸ ಮಾಡಿರುತ್ತಾರೆ. ಇದರಿಂದ ದಲಿತ ಯುವಕನ ಮಾನ ಮರ್ಯಾದೆ ತೆಗೆಯುವ ಕೆಲಸವನ್ನು ಪಿ.ಎಸ್.ಐ, ಅರ್ಜುನ ಮಾಡಿರುತ್ತಾರೆ. ಅಲ್ಲದೇ ರಾಜ್ಯದಲ್ಲಿ ಮೇಲಿಂದ ಮೇಲೆ ದಲಿತರ ಮೇಲೆ ನಡೆಯುತ್ತಿರುವ ಅಪಕೃತ್ಯಗಳು ಶೋಷಣೆಗೆ ಒಳಗಾಗದಂತೆ ಸರ್ಕಾರ ಮುನ್ನೆಚ್ಚರ ವಹಿಸಿ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು.
ಅವಕಾರಣ ತಾವುಗಳು ಸದರಿ ಪಿ.ಎಸ್.ಐ. ಅರ್ಜುನರನ್ನು ಈ ಕೂಡಲೇ ಸೇವೆಯಿಂದ ಅಮಾನತ್ತುಗೊಳಿಸಬೇಕು ಹಾಗೂ ಸದರಿ ಪುನೀತ್ ಕುಟುಂಬಕ್ಕೆ ಸದರಿ ಪಿ.ಎಸ್.ಐ, ಅರ್ಜುನರಿಂದ ಮಾನನಷ್ಟ ರೂಪವಾಗಿ ರೂ. 50-00 ಲಕ್ಷ ಪರಿಹಾರ ಕಲ್ಪಿಸಿ ಕೊಡ ಬೇಕಾಗಿ ಸಂಘಟನೆಯು ಈ ಮೂಲಕ ಒತ್ತಾಯಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಆನಂದಪ್ಪ ಮಾಡಗಿರಿ ಗೌರವ ಅಧ್ಯಕ್ಷರು, ಮಹಾದೇವ ತುಪ್ಪದೂರು ಉಪಾಧ್ಯಕ್ಷ, ಸಿದ್ರಾಮ ನೀರಮಾನವಿ ಕಾರ್ಯದರ್ಶ,. ರಮೇಶ ನೀರಮಾನವಿ ತಾಲೂಕ ಅಧ್ಯಕ್ಷರು, ಹುಲಿಗೇಶ್ ಚಿಮ್ಲಾಪುರು, ಸಂ ಕಾರ್ಯದರ್ಶಿ, ಕಿರಣ ತಡಕಲ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರರು ಉಪಸ್ಥಿತರಿದ್ದರು.