ಸಿರವಾರ : ಕಾಂಗ್ರೆಸ್ ಹಿರಿಯ ಮುಖಂಡ ವೈ ಶರಣಯ್ಯ ನಾಯಕ ಅವರ ೪೭ ನೇ ಹುಟ್ಟು ಹಬ್ಬವನ್ನು ಕಾರ್ಯಕರ್ತರ ನೇತೃತ್ವ ದಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಹಾಗೂ ಪ.ಪಂ ಮಾಜಿ ಉಪಾ ಧ್ಯಕ್ಷ ಗಡ್ಲ ಚನ್ನಬಸವ ನಾಯಕ ಅವರು, ಇವರು ಸರಳ ಸಜ್ಜನಿಕೆಯ ಸೇವಾ ಮನೋಭಾವದ ಸ್ನೇಹಮಹಿ ಜೀವನ ಎಲ್ಲರಿಗೂ ಆದರ್ಶವಾಗಿದೆ.
ಕಾರ್ಯಕ್ರಮಕ್ಕೆ ಕಾರ್ಯಕರ್ತರು, ಜನಪ್ರತಿನಿಧಿಗಳು, ಅಭಿಮಾನಿಗಳು ಹಾಗೂ ಜನತೆ ಸಹ ಆಗಮಿಸಿ ಹುಟ್ಟು ಹಬ್ಬಕ್ಕೆ ಶುಭಾ ಶಯ ತಿಳಿಸಿದರು.
ಈ ಸಂದರ್ಭದಲ್ಲಿ ಸೂರಿ ದುರುಗಣ್ಣ ನಾಯಕ, ಹಸೇನ್ ಅಲಿ, ಮೌಲಸಾಬ್, ಹಾಜಿ ಚೌದ್ರಿ, ರಾಜು, ದುರುಗಪ್ಪ, ಮಹಮ್ಮದ್ ರಫಿ, ಗಡ್ಲ ಅಮರೇಶ, ನಾಗೋಲಿ ಚನ್ನಪ್ಪ, ನವಲಕಲ್ ದೇವಣ್ಣ, ಯಲ್ಲಪ್ಪ ದೊರೆ ಹಾಗೂ ವಿರೇಶ ಮಳಗಿ ಸೇರಿದಂತೆ ಕಾರ್ಯ ಕರ್ತರಿದ್ದರು.