ಬೆಂಗಳೂರು: ರಾಜ್ಯಾದ್ಯಂತ ಕೊರೋನಾ ವಿಚಾರದಲ್ಲಿ ಮುಂಜಾಗ್ರತೆ ವಹಿಸಲು ಈ ವರ್ಷ ನಾಡಹಬ್ಬ ದಸರಾವನ್ನು ಅತ್ಯಂತ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಈ ಬಾರಿದ ದಸರಾವನ್ನು ಕೊರೊನಾ ವಾರಿಯರ್ಸ್ ಉದ್ಘಾಟಿಸಲಿದ್ದಾರೆ. ಮತ್ತು ಈ ಆಚರಣೆ ಚಾಮುಂಡಿ ಬೆಟ್ಟ, ಅರಮನೆಗೆ ಸೀಮಿತವಾಗಿರಲಿದೆ. ಫಲಪುಷ್ಟ ಪ್ರದರ್ಶನ, ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ ಇರಲ್ಲ ಎಂದು ವಿವರ ನೀಡಿದರು.