Saturday, 27th April 2024

ವೈಯಕ್ತಿಕ ದ್ವೇಷ: ೧೩೬ ಅಡಿಕೆ ಸಸಿ ಕಡಿದು ಅಟ್ಟಹಾಸ

ಗುಬ್ಬಿ: ತಾಲ್ಲೂಕಿನ ನಿಟ್ಟೂರು ಹೋಬಳಿ ಸೋಮಲಾಪುರ ಗ್ರಾಮದ ರೈತರಾದ ಚಿದಾನಂದಪ್ಪ, ನಟರಾಜ್ ಮತ್ತು ಜಯರಾಮಯ್ಯ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಒಂದೂವರೆ ವರ್ಷದಿಂದ ೩ ವರ್ಷ ಪ್ರಾಯದ ಸುಮಾರು ೧೩೬ ಅಡಿಕೆ ಸಸಿಗಳನ್ನು ಶನಿವಾರ ತಡರಾತ್ರಿ ದುಷ್ಕರ್ಮಿಗಳು ವೈಯಕ್ತಿಕ ದ್ವೇಷದ ಹಿನ್ನಲೆ ಕಡಿದು ನಾಶ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ಭಾನುವಾರ ಮುಂಜಾನೆ ಎಂದಿನAತೆ ತೋಟಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು ಈ ಮೂವರ ರೈತರ ಕುಟುಂಬಕ್ಕೆ ಆಘಾತವಾಗಿದೆ. ಹಗಲಿರುಳು ಕಾದು ಮಕ್ಕಳಂತೆ ಪೋಷಿಸಿದ್ದ ಅಡಿಕೆ ಸಸಿಗಳು ಸೊಗಸಾಗಿ ಬೆಳೆದಿತ್ತು. ಕೃಷಿ ಚಟುವಟಿಕೆಯಲ್ಲಿ ಇಂತಹ ಹೀನ ಕೃತ್ಯವೆಸಗಿರುವುದು ನೋವಿನ ಸಂಗತಿ. ಈ ದುಷ್ಕರ್ಮಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಸ್ಥಳಕ್ಕೆ ಚೇಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

 

error: Content is protected !!