ಪಾವಗಡ: ಪಟ್ಟಣದ ವಾಸಿ ಎಂ.ಡಿ.ಆಜಾಂ ಸಾಬ್ ಅಜಾತಶತ್ರು ಮಂಗಳವಾರ ವಿಧಿವಶರಾಗಿದ್ದು, ಕಳೆದ ಹಲವು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಎಂ.ಆಜಾಂ ಸಾಬ್ ಹಿರಿಯ ಕ್ರೀಡಾಪಟು. ಅದರ ಜೊತೆಯಲ್ಲಿ ಕಾಂಟ್ರಾಕ್ಟ್ ಕೆಲಸ ಮಾಡಿಸುತ್ತಿದ್ದರು. ಅದರಲ್ಲಿ ತಾಲೂಕಿನ ಸರ್ಕಾರಿ ಕಚೇರಿಗಳು ಹಾಗೂ ದೇವಾಲಯ ಗಳ ಕಾಂಟ್ರಾಕ್ಟ್ ಕೆಲಸ ಮಾಡಿಸುತ್ತಿದ್ದರು. 25ವರ್ಷಗಳ ಕಾಲ ಪಟ್ಟಣದ ಜಾಮೀಯ ಮಸೀದಿಯ ಸದಸ್ಯರಾಗಿದ್ದರು. ಇವರಿಗೆ ನಾಲ್ಕು ಹೆಣ್ಣುಮಕ್ಕಳು.ಮೂರು ಗಂಡು ಮಕ್ಕಳನ್ನು ಆಗಲಿದ್ದಾರೆ.
ಎಂ.ಡಿ.ಆಜಾಂ ಸಾಬ್ ರ ನಿಧನಕ್ಕೆ ಶಾಸಕರಾದ ವೆಂಕಟರಮಣಪ್ಪ. ಮಾಜಿ ಶಾಸಕ ತಿಮ್ಮಾರಾಯಪ್ಪ. ಜಿಲ್ಲಾ ಪಂಚಾಯತ್ ಸದಸ್ಯರು ಚನ್ನಮಲ್ಲಪ್ಪ.ಮಾಜಿ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಸೊಗಡು ವೆಂಕಟೇಶ. ಪುರಸಭೆ ಅಧ್ಯಕ್ಷ ರಾಮಾಂಜಿನಪ್ಪ,
ಮಾಜಿ ಪುರಸಭೆ ಅಧ್ಯಕ್ಷ ಅಂಜನ್ ಕುಮಾರ್.ಪುರಸಭೆ ಸದಸ್ಯರರಾದ ರವಿ.ರಾಜೇಶ್.ಮಹಮದ್ ಇಮ್ರಾನ್, ಮಣಿ, ಮುಸ್ಲಿಂ ಸಮುದಾಯದ ಮುಖಂಡರುಗಳಾದ ಫಜ್ಲುಸಾಬ್, ಅನ್ವರ್ ಸಾಬ್.ಆರ್.ಟಿ.ಖಾನ್, ಹಿದಾಯತ್, ಷಕೀರ್, ಆರ್.ಕೆ.ನಿಸಾರ್ ಇತರೆ ಅನೇಕ ಮಂದಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.