ಮಾನ್ವಿ: ತಾಲೂಕಿನ ಪ್ರತಿಷ್ಟಿತ ತಾಲೂಕು ವೀರಶೈವ ಸಮಿತಿಯ ನೂತನ ಅಧ್ಯಕ್ಷರಾಗಿ ಆವಿರೋಧವಾಗಿ ಆಯ್ಕೆಗೊಂಡ ಸಮಾಜದ ಹಿರಿಯರಾದ ಚೀಕಲಪರ್ವಿ ವೀರಪ್ಪಗೌಡರನ್ನು ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಸನ್ಮಾನಿಸಿ ಆಯ್ಕೆ ಪತ್ರವನ್ನು ನೀಡಿ ಮಾತನಾಡಿ ವೀರಶೈವ ಲಿಂಗಾಯತ ಸಮಾಜದ ಸರ್ವಸದಸ್ಯರ ಪೂರ್ವಭಾವಿ ಸಭೆಯಲ್ಲಿ ಸರ್ವಸದಸ್ಯರ ಅಭಿಪ್ರಾಯದಂತೆ ನೂತನ ತಾಲೂಕು ಆಧ್ಯಕ್ಷರ ಆಯ್ಕೆ ಹಾಗೂ ವಸತಿ ನಿಲಯದ ಅಭಿವೃದ್ದಿ ಕುರಿತು ಸಮಾಜದ ೧೨ ಜನ ಹಿರಿಯರ ಸಮಿತಿಯನ್ನು ರಚಿಸಲಾಗಿತು ಬುಧುವಾರ ನಡೆದ ಸಮಿತಿಯ ಸಭೆಯಲ್ಲಿ ಸಮಾಜದ ಹಿರಿಯರಾದ ಚೀಕಲಪರ್ವಿ ವೀರಪ್ಪ ಗೌಡರನ್ನು ತಾಲೂಕು ವೀರಶೈವ ಸಮಿತಿಯ ನೂತನ ಅಧ್ಯಕ್ಷರಾನ್ನಾಗಿ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದ್ದು ಶ್ರೀಯುತರು ವೀರಶೈವ ಸಮಾಜದ ಆಭೀವೃದ್ದಿಗೆ ಶ್ರಮಿಸಲಿ ಎಂದು ತಿಳಿಸಿದರು.
ಪಟ್ಟಣದ ಶ್ರೀ ಒಳಬಳ್ಳಾರಿ ಚನ್ನಬಸವ ಸ್ವಾಮಿಗಳ ವಸತಿ ನಿಲಯದಲ್ಲಿ ನಡೆದ ಆಯ್ಕೆಯಲ್ಲಿ ಮಾಜಿ ಜಿ.ಪಂ.ಅಧ್ಯಕ್ಷ ದೊಡ್ಡ ಬಸಪ್ಪಗೌಡ ಭೋಗಾವತಿ, ಅಮರೇ ಗೌಡ ನಕ್ಕುಂದಿ,ನಕ್ಕುAದಿ ಮಲ್ಲನಗೌಡ, ಈರ ರಾಮನಗೌಡ, ಅಲ್ದಾಳವೀರಭದ್ರಪ್ಪಗೌಡ, ಕೃಪಸಾಗಾರಪಾಟೀಲ್, ಶೇಖರಪ್ಪ ಪಾಟೀಲ್ ವಕೀಲರು, ಟಿ.ಎ.ಪಿ.ಎಂ.ಸಿ.ಅಧ್ಯಕ್ಷರಾದ ತಿಮ್ಮರೆಡ್ಡಿ ಭೋಗವತಿ ಸೇರಿದಂತೆ ಇನ್ನಿತರ ಸಮಾಜದ ಗಣ್ಯರು ಭಾಗವಹಿಸಿ ಶ್ರೀಯುತರಿಗೆ ಶುಭಕೊರಿದ್ದರು.