ಯಲ್ಲಾಪುರ/ ಶಿರಸಿ: ಮುಂಡಗೋಡದ ತಾಲೂಕಾ ಮಾರ್ಕೆಟಿಂಗ್ ಸೊಸೈಟಿಯ ಚುನಾವಣೆಯಲ್ಲಿ ಭಾರತದ ಜನತಾ ಪಕ್ಷದ ಬೆಂಬಲಿತ 11 ಅಭ್ಯರ್ಥಿಗಳ ಗೆಲುವಿಗೆ ಶ್ರಮವಹಿಸಿ ತಾಲೂಕಾ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮುಖಂಡ ರಾದ ಎಲ್.ಟಿ.ಪಾಟೀಲ್, ರವಿ ಗೌಡ ಪಾಟೀಲ್, ಉಮೇಶ್ ಬಿಜಾಪುರ ಹಾಗೂ ಮಹೇಶ ಹೊಸಕೊಪ್ಪ, ವಿನಾಯಕ ರಾಯ್ಕರ್, ಹಾಗೂ ಗುಡ್ಡಪ್ಪ ಕಾತೂರ ಹಾಗೂ ಪಕ್ಷದ ಸಮಸ್ತ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸಚಿವ ಶಿವರಾಮ ಹೆಬ್ಬಾರ್ ಅವರು ಅಭಿನಂದನೆ ಸಲ್ಲಿಸಿದರು.
ಇಂದು ಪ್ರಮುಖರಾದ ಎಲ್.ಟಿ.ಪಾಟೀಲ್, ರವಿ ಗೌಡ ಪಾಟೀಲ್ ಹಾಗೂ ಬಿಜೆಪಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ ಅವರನ್ನು ಸಚಿವ ಶಿವರಾಮ ಹೆಬ್ಬಾರ್ ಅವರು ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಮುಖ ರಾದ ವಿಜಯ ಮಿರಾಶಿ ಪಕ್ಷದ ಮುಖಂಡರು, ವಿವಿಧಸ್ತರದ ಪದಾಧಿಕಾರಿಗಳು ಹಾಜರಿದ್ದರು.