ಗುಬ್ಬಿ: ಗಂಡ ಹೆಂಡತಿಯ ನಡುವೆ ಮಂಗಳವಾರ ರಾತ್ರಿ ಜಗಳ ನಡೆದು ವಿಕೋಪಕ್ಕೆ ತಿರುಗಿ ಸ್ವಾಮಿ ಎಂಬಾತ ಹಾರೆಯಿಂದ ಹೆಂಡತಿ ಹಾಗೂ ಮಗುವಿನ ತಲೆಗೆ ಬಲವಾಗಿ ಹೊಡೆದಿ ದ್ದಾನೆ. ತೀವ್ರ ರಕ್ತ ಸ್ರಾವದಿಂದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾವ್ಯ 25 ಹಾಗೂ ನಾಲ್ಕು ವರ್ಷದ ಮಗು ಜೀವನ್ ಕೊಲೆಯಾದ ದುರ್ದೈವಿಗಳು. ತಾಲೂಕಿನ ಕೊಂಡ್ಲಿ ಸಮೀಪದ ಮಾವಿನಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ.
ತಪ್ಪಿಸಿಕೊಂಡು ಓಡಲು ಯತ್ನಿಸಿದ ಸ್ವಾಮಿ ಎಂಬಾತನನ್ನು ಸ್ಥಳೀಯ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.