ಗೋಕಾಕ್: ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಪಕ್ಷವು ತಮ್ಮೊಳಗಿನ ಒಳಜಗಳ ಮುಚ್ಚಿ ಹಾಕುವುದಕ್ಕೆ ಡ್ರಗ್ಸ್ ವಿಚಾರ ತಂದಿದ್ದಾರೆ ಎಂದು ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಮಾತನಾಡಿದ ಅವರು, ಡ್ರಗ್ಸ್ ವಿಚಾರದಲ್ಲಿ ನೆಪ ಮಾತ್ರಕ್ಕೆ ತನಿಖೆ ನಡೆಯುತ್ತಿದೆ. ಕಿಂಗ್ ಪಿನ್ ಗಳ ಹೆಸರು ತಿಳಿದಿದ್ದರೆ , ನೇರವಾಗಿ ಬಂಧಿಸಲಿ. ಅದಕ್ಕೆ ಅಲ್ಪಸಂಖ್ಯಾತ ನಾಯಕರನ್ನು ತಪ್ಪಿ ತಸ್ಥರನ್ನಾಗಿ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಕಳೆದ ಶುಕ್ರವಾರ ಸಾವಿರಾರು ಕೆಜಿ ಗಾಂಜಾ ಜಪ್ತಿ ಆಯ್ತು. ಗಾಂಜಾ ಸಿಕ್ಕಿರುವ ಹಿಂದಿನ ಕಿಂಗ್ಪಿನ್ ಯಾರು ? ಎಂದು ಪತ್ತೆ ಮಾಡಲಿ ಎಂದು ಹೇಳಿದರು.