Sunday, 19th May 2024

ಭಾರತೀಯ ಸೇನೆಗೆ ಆಯ್ಕೆ, ಸನ್ಮಾನ

ಇಂಡಿ: ಸಾತಲಗಾಂವ ಗ್ರಾಮದ ಶ್ರೀಶೈಲ ಮುತ್ತಪ್ಪ ನಂದಗೊ0ಡ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಪ್ರಯುಕ್ತ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಶಾಲು ಹೊದಿಸಿ ಸನ್ಮಾನಿಸಿದರು.

ಜೈ ಜವಾನ ಜೈ ಕಿಸಾನ ರೈತ ಹಾಗೂ ಸೈನಿಕ ದೇಶದ ದೊಡ್ಡ ಶಕ್ತಿ ರೈತ ದೇಶಕ್ಕೆ ಅನ್ನ ನೀಡುವ ಧನಿಯಾದರೆ ಸೈನಿಕ ದೇಶದ ಗಡಿಯಲ್ಲಿ ಮಳೆ ಚಳಿ ಎನ್ನದೆ ನಮ್ಮನ್ನು ಕಾಪಾಡುವ ಬ್ರಹ್ಮ ಆದ್ದರಿಂದ ಇವು ಎರಡು ದೇಶದ ಅಮೂಲ್ಯ ರತ್ನಗಳು. ಶ್ರೀಶೈಲ ಮುತ್ತಪ್ಪ ನಂದಗೊ0ಡ ಬಡತನದಲ್ಲಿ ಹುಟ್ಟಿದರೂ ಛಲಬಿಡದೆ ಆತ್ಮಸ್ಥೆರ್ಯೇ ದೊಂದಿಗೆ ದೇಶ ಸೇವೆ ಮಾಡಲು ಸೈನಿಕ ವೃತ್ತಿ ಆಯ್ಕೆ ಮಾಡಿಕೊಂಡಿರುವುದು ಸ್ವಾಗ ತಾರ್ಹ.

ಇಂದು ಈ ಭಾಗದಲ್ಲಿ ಸಾಕಷ್ಟು ಯುವಕರು ದೇಶ ಸೇವೆ ಈಶ ಸೇವೆ ಎಂಬ ಉಕ್ತಿಯಂತೆ ಸೇವಾ ಭಾವ ಹೊಂದಿ ದೇಶಪ್ರೇಮದಿಂದ ದೇಶ ಕಾಯಲು ಹೊರಟಿರುವುದು ಸಂತಸ ತಂದಿದೆ. ತಾಯಿ ಭಾರತ ಮಾತೆಯ ರಕ್ಷಣೆ ಮಾಡಲು ಒಳ್ಳೇಯ ಸುಧೀರ್ಘ ಆರೋಗ್ಯ ಭಾಗ್ಯ ಕೊಟ್ಟು ನೂರ್ಮಡಿ ಶಕ್ತಿ ವೃದ್ದಿಸಲಿ ಎಂದು ಹಾರೈಸಿದರು.

ಸಿದ್ದು ಡಂಗಾ, ಪರವತಯ್ಯಾ ಮಠ, ಸಿದ್ದಪ್ಪ ನಂದಗೊ0ಡ, ಬಾಳು ರಾಠೋಡ, ಬಂದು ತಾಂಬೋಳಿ, ನಾರಾಯಣ ವಾಲೀಕಾರ, ಪ್ರಶಾಂತ ನಂದಗೊ0ಡ, ದತ್ತು ನಂದಗೊ0ಡ, ಸಿದ್ದು ನಂದಗೊ0ಡ ಸೇರಿದಂತೆ ಅನೇಕರಿದ್ದರು.

error: Content is protected !!