Monday, 20th May 2024

ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಕಾರ್ಯ ನಿರತ ಪತ್ರಕರ್ತರಿಕೆ ಸಹಾಯಹಸ್ತ

ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ ಸಹಕಾರ
ಪಾವಗಡ:  ಪತ್ರಕರ್ತರ ಒಕ್ಕೂಟದ ಸದಸ್ಯರುಗಳಿಗೆ ದವಸ ಧಾನ್ಯ, ಅಡುಗೆ ಎಣ್ಣೆ ವಿತರಣೆ ಕೋವಿಡ್19 ಎರಡನೇ ಅಲೆ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ಬದಿಗಿಟ್ಟು ಎಲ್ಲೆಡೆ ಸಂಚರಿಸುತ್ತಾ ಸುದ್ದಿಗಳನ್ನು ಪ್ರಸಾರ ಮಾಡಲು ಅತ್ಯಮೂಲ್ಯ ವಾದ ಪಾತ್ರವನ್ನು ವಹಿಸು ತ್ತಿರುವ ಪತ್ರಕರ್ತರಿಗೆ ಪೂಜ್ಯ ಸ್ವಾಮಿ ಜಪಾನಂದಜೀ ರವರು ಇನ್ಫೋಸಿಸ್ ಫೌಂಡೇಷನ್ ಸಹಕಾರ ದೊಂದಿಗೆ ದವಸ ಧಾನ್ಯ, ಅಡುಗೆ ಎಣ್ಣೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಾಧ್ಯಮ ಒಕ್ಕೂಟದ ಪದಾಧಿಕಾರಿಗಳಲ್ಲಿ ಒಬ್ಬರಾದ ಪ್ರಸನ್ನ ಮೂರ್ತಿ ರವರು ಉಪಸ್ಥಿತರಿದ್ದು ಪತ್ರಕರ್ತರಿಗೆ ಶ್ರೀರಾಮಕೃಷ್ಣ ಸೇವಾಶ್ರಮ ಹಾಗೂ ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದೊಂದಿಗೆ ನಡೆಸುತ್ತಿರುವ ಸೇವಾ ಕಾರ್ಯಗಳ ಪರಿಚಯವನ್ನು ನೀಡಿದರು.
ಇದೇ ಸಂದರ್ಭದಲ್ಲಿ ಆರ್ಯವೈಶ್ಯ ಸಂಘದ ಅಧ್ಯಕ್ಷ ಸುದೇಶ್ ಬಾಬು ರವರು ಮಾತನಾಡಿ ಪೂಜ್ಯ ಸ್ವಾಮೀಜಿಯವರು ಕೈಗೊಂಡಿ ರುವ ಈ ಕಾರ್ಯಕ್ರಮ ದಲ್ಲಿ ಸಂಯೋಜಕರಾಗಿ ಭಾಗವಹಿಸುತ್ತಿರುವ ನಮಗೆ ಇದೊಂದು ಭಾಗ್ಯ ಎಂದು ಬಣ್ಣಿಸಿದರು.
ಯಜ್ಞನಾರಾಯಣ ಶರ್ಮ, ಹಿರಿಯ ವಕೀಲರು, ಲೋಕೇಶ್ ದೇವರಾಜ್ ಹಾಗೂ ವಿವೇಕ ಬ್ರಿಗೇಡಿನ ಸದಸ್ಯರೆಲ್ಲರೂ ಭಾಗವಹಿ ಸಿದ್ದ ಕಾರ್ಯಕ್ರಮ ಅಚ್ಚುಕಟ್ಟಾಗಿ ಎಲ್ಲರಿಗೂ ಸಂತೋಷವನ್ನು ತಂದಂತಹ ಕಾರ್ಯಕ್ರಮ ವಾಗಿತ್ತು.

Leave a Reply

Your email address will not be published. Required fields are marked *

error: Content is protected !!