ತುಮಕೂರು: ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಮಾನಸ ಸರೋವರ ಸೇರಿದಂತೆ ಹಲವು ಭಾಷೆಯ ಚಿತ್ರ ಗಳಿಗೆ ಛಾಯಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಬಿ.ಎಸ್.ಬಸವರಾಜುರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ತಿಪಟೂರಿನ ಮೂಲದ ಬಸವರಾಜು ಚಿಕ್ಕವಯಸ್ಸಿನಲ್ಲಿಯೇ ಛಾಯಗ್ರಹಣದ ಕಡೆ ಆಸಕ್ತಿ ಹೊಂದಿದ್ದ ರು. ಪುಟ್ಟಣ್ಣ ಕಣಗಾಲ್ ಗರಡಿಯಲ್ಲಿ ಪಳಗಿದ ಇವರು ಅಮೃತಘಳಿಗೆ ಸೇರಿದಂತೆ ಸುಮಾರು 80ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅದ್ಭುತ ಛಾಯಾ ಗ್ರಹಣ ನೆರವೇರಿಸಿದ್ದಾರೆ. ಪ್ರಾಥಮಿಕ, ಹೈಸ್ಕೂಲ್ ಶಿಕ್ಷಣವನ್ನು ತಿಪಟೂರಿನ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಕಾಲೇಜು […]