ದ್ವಿತೀಯ ಪಿಯು ಓದುತ್ತಿರುವ ವಿಜಯಪುರ ಜಿಲ್ಲೆ ಹಿಂಡಿ ತಾಲೂಕಿನ ಇಂಗಳಗಿ ಗ್ರಾಮದ ಭೀಮ ಶಂಕರ ಮಧ್ಯಾಹ್ನ ಕಾಲೇಜು ಮುಗಿಸಿ ಇಸ್ರೋ ನಿಲ್ದಾಣದಲ್ಲಿ ಬಸ್ ಇಳಿದು ಮಠಕ್ಕೆ ತೆರಳುವಾಗ ಚಾಕುವಿನಿಂದ ಹಲ್ಲೆ ನಡೆದಿದೆ.
3 ವರ್ಷದಿಂದ ಮಠದಲ್ಲಿ ಓದುತ್ತಿದ್ದು, ಹಲ್ಲೆ ನಡೆಸಿದವರು ಅಪರಿಚಿತರು ಎಂದು ಹೇಳಿಕೆ ನೀಡಿದ್ದಾನೆ. ವಿದ್ಯಾರ್ಥಿಯ ಎಡಗೈಗೆ ಬಲವಾದ ಪೆಟ್ಟು ಬಿದ್ದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಕೈಗೆ 30 ಹೊಲಿಗೆ ಹಾಕಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.