ಮಂಡ್ಯ : ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕೊಟ್ಟಿದ್ದಾರೆ. ಏನ್ ಹೇಳ್ತೀರಿ ಎಂದು ಕೇಳಿದ ಮಾಧ್ಯಮದವರಿಗೆ, ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎನ್ನುವ ಮೂಲಕ, ನಟಿ ರಾಧಿಕಾ ಕುಮಾರಸ್ವಾಮಿ ನನಗೆ ಗೊತ್ತಿಲ್ಲ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ನಾನು ರಾಜ್ಯ ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಉದ್ದೇಶ ಇರುವುದು ಎರಡೂವರೆ ವರ್ಷ ಸರ್ಕಾರದ ಅವಧಿ ಮುಕ್ತಾಯದ ನಂತರ ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ಥಿತ್ವಕ್ಕೆ ತರುವುದು. 2023 ಕರ್ನಾಟಕದ ರಾಜ್ಯ ಜನತಾದಳದ ರಾಜ್ಯ. ಜನತಾ ರಾಜ್ಯ ಅದರ ಬಗ್ಗೆ ಚಿಂತೆ ಮಾಡುತ್ತೇನೆ ಎಂದರು.